ಮೃತ ರೈತ ಕುಟುಂಬಕ್ಕೆ ‘ರೈತ ಸಂಜೀವಿನಿ’ ಪರಿಹಾರ

450

ಮಂಡ್ಯ: ರೈತನೊಬ್ಬ ಕೃಷಿ ಪಂಪ್ ಸೆಟ್ ಚಾಲನೆ ಮಾಡಲು ಹೋಗಿದ್ದ ವೇಳೆ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಮೃತಪಟ್ಟಿದ್ದ. ಆತನ ಕುಟುಂಬಕ್ಕೆ ರೈತ ಸಂಜೀವಿನಿ ಯೋಜನೆಯಲ್ಲಿ ಬಿಡುಗಡೆಯಾದ ಪರಿಹಾರದ ಆದೇಶ ಪ್ರತಿಯನ್ನ ನೀಡಲಾಯ್ತು.

ಒಂದು ಲಕ್ಷ ರೂಪಾಯಿ ಪರಿಹಾರದ ಆದೇಶ ಪ್ರತಿಯನ್ನ ತಾಲೂಕು ಎಪಿಎಂಸಿ ಅಧ್ಯಕ್ಷರಾದ ಐನೋರಹಳ್ಳಿ ಮಲ್ಲೇಶ ಅವರು  ಮೃತರ ಕುಟುಂಬಕ್ಕೆ ವಿತರಣೆ ಮಾಡಿದರು. ಕಳೆದ 3 ತಿಂಗಳ ಹಿಂದೆ ಕಿಕ್ಕೇರಿ ಗೋವಿಂದನಹಳ್ಳಿ ಗ್ರಾಮದ ರೈತ ನಿರಂಜನಮೂರ್ತಿ, ತಮ್ಮ ಜಮೀನಿನಲ್ಲಿನ ಕೃಷಿ ಪಂಪ್ ಸೆಟ್ ಚಾಲನೆ ಮಾಡುವಾಗ ಕೇಬಲ್ ವೈರ್ ಕಟ್ಟಾಗಿ ವಿದ್ಯುತ್ ತಗುಲಿ ಮೃತಪಟ್ಟಿದ್ದರು. ಹೀಗಾಗಿ ರಾಜ್ಯ ಸರ್ಕಾರದ ಕೃಷಿ ಮಾರುಕಟ್ಟೆ ಇಲಾಖೆಯ ರೈತ ಸಂಜೀವಿನ ಯೋಜನೆ ಅಡಿಯಲ್ಲಿ 1 ಲಕ್ಷ ಪರಿಹಾರದ ಹಣ ಬಿಡುಗಡೆಯಾಗಿತ್ತು. ಹೀಗಾಗಿ ಪಟ್ಟಣದ ಎಪಿಎಂಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೃತ ರೈತ ನಿರಂಜನಮೂರ್ತಿ ತಂದೆ ಲಿಂಗಪ್ಪ ಅವರಿಗೆ ಪರಿಹಾರದ ಆದೇಶದ ಪ್ರತಿ ನೀಡಲಾಯ್ತು.

ಈ ವೇಳೆ ಎಪಿಎಂಸಿ ಉಪಾಧ್ಯಕ್ಷ ಅಶೋಕ, ಮಾಜಿ ಅಧ್ಯಕ್ಷ ನಾಗರಾಜೇಗೌಡ,  ನಿರ್ದೇಶಕ ಶಶಿಧರ ಸಂಗಾಪುರ, ಎ.ಎಂ.ಸಂಜೀವಪ್ಪ, ಮಹೇಶ್ವರಿನರಸೇಗೌಡ, ಚಂದ್ರಹಾಸ, ಸೋಮಸುಂದರ, ಎಪಿಎಂಸಿ ಕಾರ್ಯದರ್ಶಿ ರಫಿಕ ಅಹಮದ, ಸತೀಶ, ತಾ.ಪಂ.ಸದಸ್ಯ ಶ್ಯಾಮಣ್ಣ,  ಪಂಚೆ ಮಹಾದೇವಪ್ಪ, ಶಂಭುಲಿಂಗಪ್ಪ, ನಾಗರಾಜು, ನಂಜುಂಡಪ್ಪ, ಎಲ್.ಪಿ.ಮನು, ಕಡೆಹೆಮ್ಮಿಗೆ ರಮೇಶ ಸೇರಿದಂತೆ ಅನೇಕರು ಉಪಸ್ಥಿತರಿದ್ರು.




Leave a Reply

Your email address will not be published. Required fields are marked *

error: Content is protected !!