ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಸ್ಯಾಂಡಲ್ ವುಡ್ ಚಿರಂಜೀವಿ ಸರ್ಜಾ ಎಲ್ಲರನ್ನು ಅಗಲಿ ಎರಡು ವರ್ಷ ಕಳೆದಿವೆ. ಆದರೆ, ಅವರ ನೆನಪು, ಅವರು ಮಾಡಿರುವ ಚಿತ್ರಗಳು ಜನರ ಮನಸ್ಸಿನಲ್ಲಿ ಸದಾ ಇರುತ್ತವೆ. ಇದೀಗ ಚಿರು ಕೊನೆಯ ಚಿತ್ರ ರಾಜಮಾರ್ತಂಡ ಬಿಡುಗಡೆಗೆ ಸಿದ್ಧವಾಗಿದೆ.
ಎಲ್ಲ ಅಂದುಕೊಂಡಂತೆ ಆಗಿದ್ದರೆ 2019ರಲ್ಲಿ ಚಿತ್ರ ಬರಬೇಕಿತ್ತು. ಆದರೆ, ಕೋವಿಡ್ ಕಾರಣಕ್ಕೆ ತಡವಾಯಿತು. ಅಷ್ಟರಲ್ಲಿ ಚಿರು ಅನಿರೀಕ್ಷಿತ ಸಾವು ಸಂಭವಿಸಿ ಇಡೀ ಚಿತ್ರರಂಗವೇ ಶಾಕ್ ಆಯ್ತು. ಅಭಿಮಾನಿಗಳು ಕಂಗಾಲಾದರು. ಇದೀಗ ಆ ನೋವಿನ ನಡುವೆ ರಾಜಮಾರ್ತಂಡ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ.
ಚಿರು ಧ್ವನಿಗೆ ಅವರ ಸಹೋದರ, ನಟ ಧ್ರುವ್ ಸರ್ಜಾ ಧ್ವನಿ ನೀಡಿದ್ದಾರೆ. ಈ ಮೊದಲೇ ಹೇಳಿದಂತೆ ಧ್ರುವ್ ಧ್ವನಿ ನೀಡಿದ್ದು, ಸೆಪ್ಟೆಂಬರ್ 2, 2022ಕ್ಕೆ ಚಿತ್ರ ರಿಲೀಸ್ ಆಗುತ್ತಿದೆ.