ತಾಯಿ, ಮಗಳ ಸಮಸ್ಯೆ ಕೇಳಿದ್ದೆ ತಪ್ಪಾಯ್ತು: ಬಿಎಸ್ವೈ

123

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಲಾಗಿದೆ ಎಂದು ದೂರು ದಾಖಲಾಗಿರುವ ಸಂಬಂಧ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಯಡಿಯೂರಪ್ಪ, ಒಂದು, ಒಂದೂವರೆ ತಿಂಗಳ ಹಿಂದೆ ಮಹಿಳೆಯೊಬ್ಬರು ಅಳುತ್ತಾ ಬಂದರು, ಏನು ಸಮಸ್ಯೆ ಎಂದು ತಾಯಿ, ಮಗಳನ್ನು ಒಳಗೆ ಕರೆದುಕೊಂಡು ಹೋಗಿ ಕೇಳಿದೆ. ಅದೆ ಈಗ ತಪ್ಪಾಗಿದೆ ಎಂದಿದ್ದಾರೆ.

ತಾಯಿ, ಮಗಳ ಸಮಸ್ಯೆ ಕೇಳಿದ ಮೇಲೆ ಪೊಲೀಸ್ ಕಮಿಷನರ್ ದಯಾನಂದ್ ಜೊತೆ ಮಾತನಾಡಿದೆ. ಅಲ್ಲೇ ನನ್ನ ವಿರುದ್ಧ ಏನೇನೋ ಮಾತನಾಡಿದ್ದಾರೆ. ಅವರ ಆರೋಗ್ಯ ಸರಿಯಿಲ್ಲ. ಹೆಚ್ಚು ಮಾತನಾಡಿ ಉಪಯೋಗವಿಲ್ಲವೆಂದು ಕಮಿಷನರ್ ಬಳಿ ಕಳಿಸಿಕೊಟ್ಟೆ ಎಂದಿದ್ದಾರೆ.

ಇದೆಲ್ಲ ನಿರೀಕ್ಷೆ ಮಾಡಿರಲಿಲ್ಲ. ಇದನ್ನು ರಾಜಕೀಯ ಹುನ್ನಾರ ಎಂದು ಹೇಳುವುದಿಲ್ಲ. ಸತ್ಯಾಸತ್ಯತೆ ಬಗ್ಗೆ ಸರ್ಕಾರ ಪರಿಶೀಲಿಸಲಿದೆ. ಗೃಹ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. ಕಾನೂನು ಪ್ರಕಾರ ಎದುರಿಸೋಣ ಅಂತಾ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!