ಯುವಕನ ಕೊಲೆ: ಸಹೋದರರಿಬ್ಬರ ಬಂಧನ

218

ಪ್ರಜಾಸ್ತ್ರ ಅಪರಾಧ ಸುದ್ದಿ

ಹುಬ್ಬಳ್ಳಿ: ಸಹೋದರಿಯನ್ನು ಚುಡಾಯಿಸಿದ ಅನ್ನೋ ಕಾರಣಕ್ಕೆ ಯುವಕನೊಬ್ಬನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹಳ್ಳೆ ಹುಬ್ಬಳ್ಳಿಯ ಬೇಪಾರಿ ಪ್ಲಾಟ್ ನಲ್ಲಿ ನಡೆದಿದೆ. ತೀವ್ರ ಗಾಯಗೊಂಡಿದ್ದ ಆಟೋ ಚಾಲಕ ಚಂದ್ರು ಗುಗ್ಗರಿ ಇಂದು ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಗುರುವಾರ ರಾತ್ರಿ ಚಂದ್ರು ಬೆನ್ನು, ಕುತ್ತಿಗೆ, ಹೊಟ್ಟಿಗೆ ವಿನಾಯಕ ಭಜಂತ್ರಿ ಹಾಗೂ ಕಿರಣ ಭಜಂತ್ರಿ ಅನ್ನೋ ಸಹೋದರರಿಬ್ಬರು ಚಾಕುವಿನಿಂದ ಇರಿದಿದ್ದಾರೆ. ತೀವ್ರ ಗಾಯಗೊಂಡಿದ್ದ ಚಂದ್ರು ಇಂದು ಮೃತಪಟ್ಟಿದ್ದಾನೆ. ಆರೋಪಿಗಳನ್ನು ಬಂಧಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!