ಲೆಹರ್ ಸಿಂಗ್ ಗೆಲ್ಲುತ್ತಾರೆ: ಸಿಎಂ ಬೊಮ್ಮಾಯಿ

178

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ 6 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಹೀಗಾಗಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಬಗ್ಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಬಿಜೆಪಿಯ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಗೆದ್ದೇ ಗೆಲ್ಲುತ್ತಾರೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯ ಮೂರನೇ ಅಭ್ಯರ್ಥಿ, ಕಾಂಗ್ರೆಸ್ ನ 2ನೇ ಅಭ್ಯರ್ಥಿ ಹಾಗೂ ಜೆಡಿಎಸ್ ನ ಓರ್ವ ಅಭ್ಯರ್ಥಿಗೆ ಮತಗಳ ಕೊರತೆ ಇದೆ. ಹೀಗಾಗಿದ್ದರೂ ನಮ್ಮ 3ನೇ ಅಭ್ಯರ್ಥಿ ಗೆಲ್ಲುತ್ತಾರೆ ಎಂದಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಏಳೆಂಟು ಜನರು ಬಹಿರಂಗವಾಗಿಯೇ ರೆಬಲ್ ಆಗಿದ್ದರು. ಈ ಬಾರಿ ಇನ್ನೊಂದು ರೀತಿ ಚುನಾವಣೆ ನಡೆಯಬಹುದು ಎನ್ನುವ ಮೂಲಕ, 3ನೇ ಅಭ್ಯರ್ಥಿ ಗೆಲುವಿಗೆ ಹೊಸ ತಂತ್ರ ಹೆಣದಿರುವುದು ಪಕ್ಕಾ ಆಗಿದೆ.




Leave a Reply

Your email address will not be published. Required fields are marked *

error: Content is protected !!