ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪಟ್ಟಣದಲ್ಲಿರುವ ನ್ಯಾಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಅರಣ್ಯ ಇಲಾಖೆ ಸಹಯೋಗದೊಂದಿಗೆ ಸಸಿ ನಡೆಲಾಯಿತು.
ಸಿವಿಲ್ ನ್ಯಾಯಾಧೀಶರಾದ ಮಹಾಂತೇಶ ಭೂಸಗೊಳ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಹರೀಶ ಜಾಧವ ಹಾಗೂ ಉಪ ವಲಯ ಅರಣ್ಯಾಧಿಕಾರಿ ಆರ್.ಎಚ್ ಜಮಾದಾರ ಸಸಿ ನಡೆಯುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು.
ಈ ವೇಳೆ ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಸಹಾಯಕ ಸರ್ಕಾರಿ ವಕೀಲರಾದ ಆನಂದ ರಾಥೋಡ, ಆರ್.ಎಫ್.ಓ ಬಿ.ಐ ಬಿರಾದರ, ಎಂ.ವೈ ಮಲಕಣ್ಣನವರ, ಡಿವೈಆರ್ ಎಫ್.ಓ ಅಶೋಕ ಲಾಳಸಂಗಿ, ಎಂ.ಎನ್ ಮುಲ್ಲಾ, ಅರಣ್ಯ ರಕ್ಷಕರಾದ ವಿ.ಎನ್ ಚಿನ್ನೂರ, ಸೋಮಣ್ಣ ಎನ್.ಬಬಲೇಶ್ವರ, ಎಸ್.ಡಿ ವಾಡಗೊಂಡ, ಪತ್ರಕರ್ತರಾದ ರವಿ ಮಲ್ಲೇದ, ಮಹಾಂತೇಶ ನೂಲನ್ನವರ ಸೇರಿದಂತೆ ವಕೀಲರು ಹಾಜರಿದ್ದರು.