ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಜೂನ್ 18ರಂದು ರಾಜ್ಯಸಭೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ನಿಂದ ಮಲ್ಲಿಕಾರ್ಜುನ ಖರ್ಗೆ ಹೆಸರು ಫೈನಲ್ ಆಗಿದೆ. ಇನ್ನು ಬಿಜೆಪಿಯಿಂದ ಈರಣ್ಣ ಕಡಾಡಿ, ಅಶೋಕ ಗಸ್ತಿ ಹೆಸರನ್ನ ಇಂದು ಅಂತಿಮಗೊಳಿಸಲಾಗಿದೆ. ಜೆಡಿಎಸ್ ನಿಂದ ದೇವೇಗೌಡರು ನಾಳೆ ನಾಮಪತ್ರ ಸಲ್ಲಿಸುವುದು ಪಕ್ಕಾ ಆಗಿದೆ.
ಇಂದು ಕಾಂಗ್ರೆಸ್ ನಿಂದ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸಿದ್ದಾರೆ. ನಾಳೆ ದೇವೇಗೌಡರು ನಾಮಪತ್ರ ಸಲ್ಲಿಸಲಿದ್ದಾರಂತೆ. ಸೋ ಬಿಜೆಪಿಯಿಂದ ಇಬ್ಬರು, ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಒಬ್ಬರು ರಾಜ್ಯಸಭೆಗೆ ಎಂಟ್ರಿಯಾಗುವ ಎಲ್ಲ ಸಾಧ್ಯತೆಗಳಿವೆ. ಅದು ಅವಿರೋಧ ಆಯ್ಕೆ ಎನ್ನಲಾಗ್ತಿದೆ.
ರಾಜ್ಯದಲ್ಲಿ ಇರೋದು 4 ರಾಜ್ಯಸಭೆ ಸ್ಥಾನಗಳು. ಹೀಗಾಗಿ ನಾಮಪತ್ರ ಸಲ್ಲಿಸ್ತಿರೋದು 4 ಜನ ನಾಯಕರು. ಇದೆಲ್ಲ ನೋಡ್ತಿದ್ರೆ ಅವಿರೋಧ ಆಯ್ಕೆ ನಡೆಯಲಿದೆ ಎಂದು ಹೇಳಲಾಗ್ತಿದೆ. ಏನು ಆಗುತ್ತೆ ಅನ್ನೋದು ಶೀಘ್ರದಲ್ಲೇ ತಿಳಿಯಲಿದೆ.