ಪರಭಾಷಾ ನಟರಿಂದ ಒದೆ ತಿಂದು ಬರಬೇಡಿಯೆಂದ ನಿರ್ದೇಶಕ

413

ಪಕ್ಕಾ ಮಾಸ್ ಆ್ಯಕ್ಷನ್ ನಿರ್ದೇಶಕ ರವಿ ಶ್ರೀವತ್ಸ, ಸ್ಯಾಂಡಲ್ ವುಡ್ ನಟರಿಗೆ ಕಿವಿ ಮಾತೊಂದು ಹೇಳಿದ್ದಾರೆ. ಹಣ, ಕೀರ್ತಿ, ಅಭಿನಯಕ್ಕಾಗಿ ಬೇರೆ ಭಾಷೆಯಲ್ಲಿ ನಟಿಸಿ. ಆದ್ರೆ, ಪರಭಾಷೆ ನಟರಿಂದ ಒದೆ ತಿಂದುಕೊಂಡು ಬರಬೇಡಿ ಎಂದು ಹೇಳಿದ್ದಾರೆ.

ನನ್ನೆಲ್ಲ ಹೀರೋಗಳಿಗೆ ಕೈಮುಗಿದ ಕೇಳಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿ ಈ ರೀತಿ ಬರೆದಿದ್ದಾರೆ. ಡಾಲಿ ಧನಂಜಯ ಟಾಲಿವುಡ್ ನ ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ ವಿರುದ್ಧ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಇದಕ್ಕೂ ಮೊದ್ಲು ನಟ ಸೇತುಪತಿ ಹೆಸರು ಕೇಳಿ ಬಂದಿತ್ತು. ಆದ್ರೆ, ಸೇತುಪತಿ ಔಟ್ ಆಗಿದ್ದು, ಡಾಲಿ ಧನಂಜಯ ಎಂಟ್ರಿಯಾಗ್ತಿದೆಯಂತೆ.

https://twitter.com/deadlysrivatsaa/status/1252418341626511362?s=20

ನಟ ಧನಂಜಯ ಎಂಟ್ರಿ ಕುರಿತು ಬಂದಿರುವ ಸುದ್ದಿಯೊಂದರ ಲಿಂಕ್ ನ್ನ ತಮ್ಮ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿಕೊಂಡು ಈ ರೀತಿಯಾಗಿ ಬರೆದಿದ್ದಾರೆ. ಇದು ಇದೀಗ ಗಾಂಧಿನಗರದಲ್ಲಿ ಭಾರೀ ಚರ್ಚೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!