ಸೋಲ್ಲಾಪುರ: ಕೈ ನಾಯಕಿ ರೇಷ್ಮಾ ಪಡೇಕನೂರ್ ಹತ್ಯೆ ಪ್ರಕರಣ ಇದೀಗ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ. ತೌಫಿಕ್ ಪೈಲ್ವಾನ್ ಹಾಗೂ ಕಾಂಗ್ರೆಸ್ ನ ಕೆಲವು ನಾಯಕರೊಂದಿಗೆ ರೇಷ್ಮಾ ಪಡೇಕನೂರ್ ಜಗಳವಾಗಿತ್ತು. ಅದಕ್ಕೆ ಆ ಜಗಳವನ್ನು ಬಗೆಹರಿಸಲು ನನ್ನ ಆಪ್ತನನ್ನು ಕಳಿಸಿದ್ದೆ ಅಂತ ಸಮ್ಮೀವುಲ್ಲಾ ಹೇಳಿದ್ದಾನೆ.
ರೇಷ್ಮಾ ಜೊತೆ ಸಂಭಾಷಣೆ ನಡೆಸಿದ್ದ ಸಮ್ಮೀವುಲ್ಲಾ ಸೋಲ್ಲಾಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ರೀತಿ ಹೇಳಿದ್ದಾನೆ. ರೇಷ್ಮಾ ಹಾಗೂ ತೌಫಿಕ್ ನಡುವೆ ವೈಮನಸ್ಸು ಇತ್ತು. ಅದನ್ನು ದೂರ ಮಾಡಲು ನಾನು ಮಧ್ಯವಸ್ಥಿಕೆ ವಹಿಸಿದ್ದೆ. ಆದರೆ, ರೇಷ್ಮಾ ಹತ್ಯೆ ನನಗೆ ಆಶ್ಚರ್ಯವಾಗಿದೆ ಅಂತಾ ಸಮ್ಮೀವುಲ್ಲಾ ಹೇಳಿದ್ದಾನೆ.