ದರೋಡೆ ಮಾಡಿದ ಸ್ನೇಹಿತೆಯ ಬಾಯ್ ಫ್ರೆಂಡ್

406

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ಗೆಳತಿಯ ಬಾಯ್ ಫ್ರೆಂಡ್ ಬಳಿ ಆಕೆಯ ಬಾಯ್ ಫ್ರೆಂಡ್ ದರೋಡೆ ಮಾಡಿದ ಘಟನೆ ಸಿಲಿಕಾನ್ ಸಿಟಿಯ ಭೈರವೇಶ್ವರ ನಗರದಲ್ಲಿ ನಡೆದಿದೆ. ಬಂಗಾಳ ಮೂಲದ ಯುವಕನನ್ನ ಅಡ್ಡಗಟ್ಟಿ ದರೋಡೆ ಮಾಡಿದ್ದ ಮೂವರನ್ನ ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜಾಕೀರ ಹುಸೇನ, ಶಬಾಜ ಖಾನ, ಫಾಜಿಲ ಬಂಧಿತ ಆರೋಪಿಗಳಾಗಿದ್ದಾರೆ. ಬಂಗಳಾದ ಸಪನ್ ಮಿಥ್ಯಾ ಅನ್ನೋ ಯುವಕ ಭೈರವೇಶ್ವರ ಬಡಾವಣೆಯಲ್ಲಿರುವ ಲವ್ವರ್ ಭೇಟಿಗೆ ಬಂದಿದ್ದಾನೆ. ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುವ ಸಪನ್, ಬರುವಾಗ 3 ಲಕ್ಷ ಮೌಲ್ಯದ ನಕ್ಲೇಸ್ ತೆಗೆದುಕೊಂಡು ಬಂದಿದ್ದಾನೆ.

ಇದನ್ನು ತಿಳಿದುಕೊಂಡ ಸಪನ್ ಲವರ್ ಸ್ನೇಹಿತೆಯ ಬಾಯ್ ಫ್ರೆಂಡ್ ಜಾಕೀರ, ತನ್ನಿಬ್ಬರ ಸ್ನೇಹಿತರ ಜೊತೆ ಸೇರಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ದಾರಿಯಲ್ಲಿ ಅಡ್ಡ ಗಟ್ಟಿ ದರೋಡೆ ಮಾಡಿದ್ದರು. ಈ ವಿಷಯ ದರೋಡೆ ಮಾಡಿದವನ ಗೆಳತಿಗೂ ಗೊತ್ತಿರ್ಲಿಲ್ಲ. ಹೀಗಾಗಿ ಗೆಳತಿ ಜೊತೆಗೆ ಹೋಗಿ ದೂರು ನೀಡಿದ್ದಳು. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಬಂಧಿಸಿದಾಗ ವಿಷಯ ಬೆಳಕಿಗೆ ಬಂದಿದೆ.




Leave a Reply

Your email address will not be published. Required fields are marked *

error: Content is protected !!