ದರೋಡೆಕೋರರನ್ನು ಹಿಡಿದ ಯುವಕರು

295

ಪ್ರಜಾಸ್ತ್ರ ಅಪರಾಧ ಸುದ್ದಿ

ಶಿವಮೊಗ್ಗ:
ಹಾಡಹಗಲೇ ಚಾಕು ತೋರಿಸಿ ದರೋಡೆ ಮಾಡಿ ಎಸ್ಕೇಪ್ ಆಗ್ತಿದ್ದ ದರೋಡೆಕೋರರನ್ನ ಯುವಕರಿಬ್ಬರು ಬೆನ್ನುಹತ್ತಿ ಹಿಡಿದಿದ್ದಾರೆ. ಕುವೆಂಪು ರಸ್ತೆಯ ನಂದಿ ಪೆಟ್ರೋಲ್ ಬಂಕ್ ಬಳಿ, ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಕೆಲಸ ಮಾಡ್ತಿದ್ದವರಿಂದ ಮೊಬೈಲ್ ಕಸಿದುಕೊಂಡಿದ್ರು. ತಂದೆ, ಮಗನಿಗೆ ಚಾಕು ತೋರಿಸಿ ಹಣ ದೋಚಿ ಪರಾರಿಯಾಗ್ತಿದ್ರು.

ಹೀಗೆ ದರೋಡೆ ಮಾಡಿ ಎಸ್ಕೇಪ್ ಆಗ್ತಿದ್ದವರನ್ನ ನೋಡಿದ ರಾಕೇಶ ಹಾಗೂ ಮನೋಜ ಅನ್ನೋ ಸ್ನೇಹಿತರು ಬೈಕ್ ಮೇಲೆ ಚೇಸ್ ಮಾಡಿದ್ದಾರೆ. ದರೋಡೆಕೋರರು ಶರಾವತಿ ನಗರದಲ್ಲಿ ಮನೆಯೊಂದಕ್ಕೆ ನುಗ್ಗಿದ್ದರು. ಅವರನ್ನ ಹಿಡಿಯಲು ಹೋದಾಗ ಓರ್ವ ತಪ್ಪಿಸಿಕೊಂಡಿದ್ದಾನೆ. ಓರ್ವನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಗಾಂಜಾ ನಶೆಯಲ್ಲಿ ಈ ಕೃತ್ಯವೆಸಗಿದ್ದಾರೆ ಎಂದು ತಿಳಿದು ಬಂದಿದೆ. ಯವಕರಿಬ್ಬರು ಮಾಡಿದ ಕೆಲಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ತಪ್ಪಿಸಿಕೊಂಡಿರುವ ಇನ್ನೊಬ್ಬನ ಕಳ್ಳನನ್ನ ಹಿಡಿಯಲು ಪೊಲೀಸರು ಮುಂದಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!