ಕರೋನಾ ನಡುವೆ ಐಟಿ ಸಿಟಿಯಲ್ಲಿ ಗುಂಡಿನ ಸದ್ದು

383

ಬೆಂಗಳೂರು: ಸಿಲಿಕಾನ್ ಸಿಟಿಯನ್ನ ಬೆಚ್ಚಿಬೀಳಿಸಿದ್ದ ಸುಬ್ರಹ್ಮಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಡಬಲ್ ಮರ್ಡರ್ ಪ್ರಕರಣದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿಸಲು ಬಂದು ಸಬ್ ಇನ್ಸ್ ಪೆಕ್ಟರ್ ಮಧು ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಲು ನೋಡಿದಾಗ ಗುಂಡು ಹಾರಿಸಲಾಗಿದೆ.

ಆರೋಪಿ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಗಾಯಗೊಂಡಿರುವ ಇನ್ಸ್ ಪೆಕ್ಟರ್ ಮಧು ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಸಂಜಯ ಅಲಿಯಾಸ ಚಿಕ್ಕಪ್ಪಿಯನ್ನ ಕೆಂಪೇಗೌಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ 12ರಂದು ಭಾನುವಾರ, ರೌಡಿಶೀಟರ್ ಮುಕುಂದ ಹಾಗೂ ಮನೋಜ ನಡುವೆ ರಾಜಿ ಸಂಧಾನ ನಡೆಯುವ ಟೈಂನಲ್ಲಿ ಅಟ್ಯಾಕ್ ಮಾಡಿ ಮರ್ಡರ್ ಮಾಡಲಾಗಿತ್ತು.

ಹೀಗೆಗಿ ಡಿಸಿಪಿ ರೋಹಿಣಿ ಕಟೋಚ್ ಅವರು ವಿಶೇಷ ಟೀಂ ರಚಿಸಿದ್ರು. ಈ ಪ್ರಕರಣದಲ್ಲಿ ನಾಲ್ಕು ಜನರನ್ನ ಬಂಧಿಸಲಾಗಿದೆ. ಬಂಧಿತರು ನೀಡಿದ ಸುಳುವಿನ ಮೇರೆಗೆ ಚಿಕ್ಕಪ್ಪಿ ಬಂಧನಕ್ಕೆ ಫಿಲ್ಡ್ ಗೆ ಇಳಿದಾಗ ಗುಂಡು ಹಾರಿಸಿ ಅರೆಸ್ಟ್ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!