ವಿಜಯಪುರದಲ್ಲಿ 8 ಜನರಲ್ಲಿ ಸೋಂಕಿನ ಲಕ್ಷಣಗಳು: ಜಿಲ್ಲಾಧಿಕಾರಿ

649

ವಿಜಯಪುರ: ಗುಮ್ಮಟನಗರಿಯಲ್ಲಿ ಇದುವರೆಗೂ ಕರೋನಾ ಸೋಂಕು ಕಾಣಿಸಿಕೊಂಡಿಲ್ಲ. ಇದ್ರಿಂದಾಗಿ ಜಿಲ್ಲೆಯ ಜನರು ಒಂದಿಷ್ಟು ನೆಮ್ಮದಿಯಾಗಿದ್ದಾರೆ. ಆದ್ರೆ, ಇದೀಗ ಆತಂಕದ ಸುದ್ದಿ ಅಂದ್ರೆ, 8 ಜನರಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಿವೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದ್ದಾರೆ.

ಮಾಧ್ಯಮಗೋಷ್ಠಿ ನಡೆಸಿ ಮಾತ್ನಾಡಿದ ಜಿಲ್ಲಾಧಿಕಾರಿ, ವಿಜಯಪುರ ಜಿಲ್ಲೆಯಲ್ಲಿ ಎಂಟು ಜನರಿಗೆ ಲಕ್ಷಣಗಳು ಕಂಡುಬಂದವೆ. ಕೆಮ್ಮು, ನೆಗಡಿ, ಜ್ವರದ ಲಕ್ಷಣಗಳು ಕಂಡುಬಂದಿವೆ. ಆ ಎಂಟು ಜನರ ಗಂಟಲು ದ್ರವ ಪಡೆದು ಸ್ಯಾಂಪಲ್ ಕಳುಹಿಸಲಾಗುವುದು ಎಂದಿದ್ದಾರೆ. ಕಾಸರಗೋಡ ಹಾಗೂ ಮಂಗಳೂರಿನಿಂದ ಬಂದವರ ಕೆಲವರ ಸ್ಯಾಂಪಲ್ ಇಂದು ಕಳುಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇದುವರೆಗೂ ಜಿಲ್ಲೆಯಲ್ಲಿ 422 ನಿಗಾದಲ್ಲಿ ಇದ್ದರು. ಅದರಲ್ಲಿ ಸಧ್ಯಕ್ಕೆ 31 ಜನ ಮಾತ್ರ ಹೋಂ ಕ್ವಾರೈಂಟನ್ ನಲ್ಲಿ ಇದ್ದಾರೆ. ಇದುವರೆಗೂ 63 ಸ್ಯಾಂಪಲ್ ಗಳನ್ನು ಕಳುಹಿಸಲಾಗಿತ್ತು. ಅದರಲ್ಲಿ 61 ರಿಪೋರ್ಟ್ ಬಂದಿದ್ದು, ಅವು ನೆಗೆಟಿವ್ ಇವೆ. ಇದೀಗ ಕೇವಲ‌ ಎರಡು ವರದಿಗಳು ಮಾತ್ರ ಬಾಕಿ ಇವೆ ಎಂದು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!