ದಾವಣಗೆರೆ: ಮಗ ಸಾವಿನ ದುಃಖ ಹೆತ್ತವರ ಎದೆಯನ್ನ ಬಿಗಿದಿದೆ. ಅಂಥಾ ನೋವಿನಲ್ಲೂ ಸಾರ್ಥಕತೆಯನ್ನ ತೋರಿದ್ದಾರೆ. ಬ್ರೈನ್ ಟ್ಯೂಮರ್ ನಿಂದ ಟಿ.ಎನ್ ಶ್ರೀನಿವಾಸ ತೋಳಹುಣಸೆ ಎಂಬುವರ ಪುತ್ರ ಇತ್ತೀಚೆಗೆ ಸಾವನ್ನಪ್ಪಿದ್ದಾನೆ. ಪುತ್ರನನ್ನ ಕಳೆದುಕೊಂಡ ಶೋಕದಲ್ಲಿಯೂ ಆತ ಕೂಡಿಟ್ಟಿದ್ದ ಹಣವನ್ನ ಸಿಎಂ ಪರಿಹಾರ ನಿಧಿಗೆ ನೀಡಲಾಗಿದೆ.
ಟಿ.ಎಸ್ ಕಿಶನ ಅನ್ನೋ ಬಾಲಕ ಮೆದುಳು ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾನೆ. ಈತ ಕೂಡಿಸಿಟ್ಟಿದ್ದ 4 ಸಾವಿರದ 1 ನೂರು ರೂಪಾಯಿಯನ್ನ ಕರೋನಾ ಪರಿಹಾರ ನಿಧಿಗೆ ನೀಡಲಾಗಿದೆ. ಜಿಲ್ಲಾಧಿಕಾರಿ ಮಹೇಶ ಬೀಳಗಿ ಅವರ ಮೂಲಕ ಸಿಎಂ ಪರಿಹಾರ ನಿಧಿಗೆ ಚೆಕ್ ನೀಡಿದ್ದಾರೆ. ಈ ಮೂಲಕ ಮತ್ತೊಬ್ಬರ ಜೀವ ಉಳಿಸಲು ಒಂದಿಷ್ಟು ಸಹಾಯ ಮಾಡಿರೋದು ಮಾನವೀಯ ಮೌಲ್ಯ ಹೆಚ್ಚಿಸಿದೆ.