ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗನ್ ಸೌಂಡ್

1068

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನಗರದಲ್ಲಿ ಇಂದು ಮತ್ತೆ ಗುಂಡಿನ ಸದ್ದು ಕೇಳಿಸಿದೆ. ಹಲ್ಲೆ ಮಾಡಿ ಎಸ್ಕೇಪ್ ಆಗಲು ನೋಡಿದ ರೌಡಿ ಮುನಿಕೃಷ್ಣ ಅಲಿಯಾಸ್ ಕಪ್ಪೆ ಮೇಲೆ ಫೈರಿಂಗ್ ಮಾಡಲಾಗಿದೆ. ಸೆರೆ ಹಿಡಿದಿರುವ ಪೊಲೀಸ್ರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಲಾಕ್ ಡೌನ್ ಸಡಿಲಿಕೆ ಬಳಿಕ ಯಶವಂತ ಎಂಬಾತ ಮೇಲೆ ಹಲ್ಲೆ ನಡೆಸಿದ್ದ. ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡು ಓಡಾಡ್ತಿದ್ದ. ಕಪ್ಪೆ ಹಾಗೂ ಆತನ ಸಹಚರರು ಮಿಟ್ಟಗಾನಹಳ್ಳಿ ಕ್ವಾರೆ ಸಮೀಪ ಇರುವು ಮಾಹಿತಿ ಸಿಕ್ಕಿದೆ. ಆಗ ಅಮೃತಹಳ್ಳಿ ಠಾಣೆ ಪೊಲೀಸ್ರು ಬಂಧಿಸಲು ಮುಂದಾದ್ರು.

ಮಿಟ್ಟಿಗಾನಹಳ್ಳಿ ಹತ್ತಿರದ ಪಾಳುಬಿದ್ದ ಮನೆಯೊಂದರ ಹತ್ತಿರ ಸ್ಕೂಟಿ ನಿಂತಿದೆ. ಹೀಗಾಗಿ ಸುತ್ತಮುತ್ತ ಪೊಲೀಸ್ರು ಹುಡುಕುತ್ತಿದ್ದಾಗ ಮನೆಯಿಂದ ಒಬ್ಬ ಎಸ್ಕೇಪ್ ಆಗಿದ್ದಾನೆ. ಮನೆ ಕವರ್ ಮಾಡಿದ ಪೊಲೀಸ್ರು ರೌಡಿ ಮುನಿಕೃಷ್ಣ ಅಲಿಯಾಸ್ ಕಪ್ಪೆನನ್ನ ಬಂಧಿಸಲು ಹೋದಾಗ, ತನ್ನ ಬಳಿಯಿದ್ದ ಡ್ರ್ಯಾಗ್ನರ್ ನಿಂದ ಹೆಡ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ್ದಾನೆ. ಇನ್ಸ್ ಪೆಕ್ಟರ್ ಶರಣಾಗುವಂತೆ ಹೇಳಿದ್ರೆ ಕೇಳದೆ ಅವರ ಮೇಲೂ ಹಲ್ಲೆಗೆ ಮುಂದಾದಾಗ ಕಾಲಿಗೆ ಗುಂಡು ಹಾರಿಸಿದ್ದಾರೆ.

ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿರುವ ಇವನ ವಿರುದ್ಧ, ಕೊಲೆ ಯತ್ನ, ಹಲ್ಲೆ ಸೇರಿದಂತೆ 8ಕ್ಕೂ ಹೆಚ್ಚು ಕೇಸ್ ಗಳಿವೆ.




Leave a Reply

Your email address will not be published. Required fields are marked *

error: Content is protected !!