ಆರ್ ಎಸ್ಎಸ್, ಸದಾನಂದಗೌಡರ ವಿರುದ್ಧ ಸಿದ್ದು ವಾಗ್ದಾಳಿ

172

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಆರ್ ಎಸ್ಎಸ್ ಕಂಡರೆ ನನಗೆ ಭಯ ಇದೆ ಎಂದು ಹೇಳಿರುವ ಮಾಜಿ ಸಿಎಂ ಸದಾನಂದಗೌಡರ ಮಾತು ನೂರಕ್ಕೆ ನೂರರಷ್ಟು ಸತ್ಯ. ನನಗೆ ಮಾತ್ರವಲ್ಲ ಜಾತ್ಯಾತೀತತೆ, ಅಹಿಂಸೆ, ಸೌಹಾರ್ದತೆ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಭಾರತೀಯನಿಗೂ ಭಯ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಭಯ ಹುಟ್ಟಿಸುವವರನ್ನು ಸಾಮಾನ್ಯವಾಗಿ ಭಯೋತ್ಪಾದಕರು ಎನ್ನುತ್ತಾರೆ. ಮಹಾತ್ಮ ಗಾಂಧಿ ಹತ್ಯೆಯ ನಂತರ ಆರ್ ಎಸ್ಎಸ್ ಮೇಲೆ ನಿಷೇಧಿದ ಹೇರಿದ್ದು ಸರ್ದಾರ್ ವಲ್ಲಾಭಾಯ್ ಪಟೇಲ್ ಎನ್ನುವುದು ನೆನಪಿರಲಿ. ತಮ್ಮ ಮಕ್ಕಳನ್ನು ದೇಶ, ವಿದೇಶಗಳಲ್ಲಿ ಉನ್ನತ ಶಿಕ್ಷಣ ಕೊಡಿಸಿ, ದಲಿತ, ಹಿಂದುಳಿದ, ಬಡ ಸಮುದಾಯದ ಮಕ್ಕಳನ್ನು ಹಿಂಸೆಗೆ ಇಳಿಸಿ ಜೈಲಿಗೆ ಅಟ್ಟುವ ಆರ್ ಎಸ್ಎಸ್ ಬಗ್ಗೆ ಭಯ ಸಹಜವಲ್ಲವೇ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!