ಭಾರತೀಯ ವಿದ್ಯಾರ್ಥಿಗಳ ತೆರವಿಗೆ ಸಿದ್ಧವೆಂದ ರಷ್ಯಾ

438

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಉಕ್ರೇನಿನ ಹಾರ್ಕಿವ್ ಹಾಗೂ ಸುಮಿಯಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳನ್ನು ತೆರವುಗೊಳಿಸುವಲ್ಲಿ ನಾವು ಸಿದ್ಧರಾಗಿದ್ದೇವೆ ಎಂದು ರಷ್ಯಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತಿಳಿಸಿದೆ. ಇಂದು 15 ದೇಶಗಳ ಸದಸ್ಯ ಬಲದ ಭದ್ರತಾ ಮಂಡಳಿ ತುರ್ತು ಸಭೆ ನಡೆಸಲಾಯಿತು.

ಭಾರತ ಸೇರಿದಂತೆ ಇತರೆ ದೇಶಗಳ ವಿದ್ಯಾರ್ಥಿಗಳನ್ನು ತೆರವುಗೊಳಿಸಲು ಉಕ್ರೇನ್ ಗಡಿ ಹತ್ತಿರದ ಆಯಾ ಸ್ಥಳಗಳಲ್ಲಿ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ರಷ್ಯಾ ರಾಯಭಾರಿಯ ಖಾಯಂ ಪ್ರತಿನಿಧಿ ವ್ಯಾಸಿಲಿ ನೆಬೆಂಜಿಯಾ ತಿಳಿಸಿದ್ದಾರೆ. ಅಲ್ದೇ, ಯಾವುದೇ ಸಮಸ್ಯೆಯಿಲ್ಲದೆ ವಿದೇಶಿ ಪ್ರಜೆಗಳನ್ನು ತೆರವುಗೊಳಿಸಲಾಗುವುದು ಎಂದರು.




Leave a Reply

Your email address will not be published. Required fields are marked *

error: Content is protected !!