ಪ್ರಜಾಸ್ತ್ರ ಅಪರಾಧ ಸುದ್ದಿ
ಧಾರವಾಡ: ಶ್ರೀಗಂಧದ ತುಂಡು ಹಾಗೂ ಚಕ್ಕೆಗಳನ್ನ ಅಕ್ರಮವಾಗಿ ಮಾರಾಟ ಮಾಡ್ತಿರುವವರನ್ನ ಬಂಧಿಸಲಾಗಿದೆ. ಹಳಿಯಾಳ ಮುರ್ಕವಾಡದ ಅರ್ಜುನ ಮಾಚಕ್, ಹುಬ್ಬಳ್ಳಿಯ ಮೆಹಬೂಬಸಾಬ್ ಸವಣೂರ ಹಾಗೂ ಕಲಘಟಗಿ ತಾಲೂಕಿನ ಶಿಗೀಗಟ್ಟಿಯ ಕೃಷ್ಣಪ್ಪ ಲಮಾಣಿ ಎಂಬುವರನ್ನ ಬಂಧಿಸಲಾಗಿದೆ.
ಗಂಧದ ತುಂಡುಗಳನ್ನ ಧಾರವಾಡದ ವಿವಿಧ ಭಾಗಗಳಲ್ಲಿ ಅಕ್ರಮವಾಗಿ ಮಾರಾಟ ಮಾಡ್ತಿದ್ದ ವೇಳೆ, ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ 5 ಲಕ್ಷ ರೂಪಾಯಿ ಮೌಲ್ಯದ 71 ಕೆಜಿ ಗಂಧದ ತುಂಡು, ತಕ್ಕಡಿ, ತೂಕದ ಕಲ್ಲುಗಳು ಹಾಗೂ ಎರಡು ಬೈಕ್ ವಶಕ್ಕೆ ಪಡೆಯಲಾಗಿದೆ.