ಇಂದು ಮಧ್ಯಾಹ್ನ ಮಾಜಿ ಸಚಿವೆಯ ಅಂತ್ಯಕ್ರಿಯೆ

382

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮಾಜಿ ಸಚಿವೆ ರೇಣುಕಾ ರಾಜೇಂದ್ರನ್(72) ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ ಚಿಕ್ಕಬಳ್ಳಾಪುರದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

1972 ಹಾಗೂ 78ರಲ್ಲಿ ಚಿಕ್ಕಬಳ್ಳಾಪುರ ಮೀಸಲು ಕ್ಷೇತ್ರದ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ವಿಧಾನಸಭೆ ಪ್ರವೇಶ ಮಾಡಿದ್ರು. ಗುಂಡೂರಾಯರ ಸರ್ಕಾರದಲ್ಲಿ ಯುವಜನಸೇವೆ ಹಾಗೂ ರೇಷ್ಮೆ ಖಾತೆಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

1972ರ ಸಮಯದಲ್ಲಿ ದೇವರಾಜ ಅರಸು ಅವರು, ಶೋಷಣೆಗೆ ಒಳಗಾದ, ರಾಜಕೀಯ ಗಂಧ ಗಾಳಿ ಗೊತ್ತಿಲ್ಲದ ಜನರಿಗೆ ಅವಕಾಶ ನೀಡಿ ಅವರಿಗೆ ರಾಜಕೀಯ ಕ್ಷೇತ್ರದಲ್ಲಿ ಸ್ಥಾನ ಮಾಡಿದ್ರು. ಅಂದು ವಿಧಾನಸೌಧದ ಮೆಟ್ಟಿಲು ಹತ್ತಿದ್ದ ಮೂವರು ದಲಿತ ಶಾಸಕರಲ್ಲಿ ರೇಣುಕಾ ರಾಜೇಂದ್ರನ್ ಸಹ ಒಬ್ಬರು.




Leave a Reply

Your email address will not be published. Required fields are marked *

error: Content is protected !!