ಸೂರ್ಯ ಚಂದ್ರರಿರುವವರೆಗೂ ಸಂವಿಧಾನ ಅಮರ: ನಿಜಗುಣಾನಂದ ಶ್ರೀ

351

ಸುರಪುರ: ಹುಣಸಿಗಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆ ಹಮ್ಮಿಕೊಂಡಿದ್ದ, ಸರ್ವಜನರ ಸಂವಿಧಾನ ಸಮಾವೇಶವನ್ನ ನಿಜಗುಣಾನಂದ ಶ್ರೀಗಳು ಉದ್ಘಾಟಿಸಿದರು.

ಸಮಾವೇಶ ಉದ್ಘಾಟಿಸಿ ಮಾತ್ನಾಡಿದ ಮುಂಡರಗಿಯ ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿ, ಈ ದೇಶದಲ್ಲಿ ಸಂವಿಧಾನ ಬದಲಾವಣೆಯ ಮಾತನಾಡಲಾಗುತ್ತಿದೆ. ಆದರೆ ಸೂರ್ಯ ಚಂದ್ರರು ಇರುವವರೆಗೂ ಅದು ಸಾಧ್ಯವಿಲ್ಲ ಎಂದರು. ದೇಶದಲ್ಲಿ ಯಾವ ಧರ್ಮದಿಂದ ಯಾವ ರಾಜರಿಂದಲೂ ಸಮಾನತೆ ಬರಲಿಲ್ಲ. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದ ಸಮಾನತೆ ಬಂದಿದೆ ಎಂದರು.

ಕಾರ್ಯಕ್ರದಮಲ್ಲಿ ಸಂಘಟನೆಯ ಪದಾಧಿಕಾರಿಗಳು, ಗಣ್ಯರು ಸೇರಿದಂತೆ ಅನೇಕರು ಭಾಗವಹಿಸಿದ್ರು. ಭೀಮರಾಯ ಅಗ್ನಿ ನಿರೂಪಿಸಿದರು. ಯಮನಪ್ಪ ಗುಂಡಲಗೇರ ಸ್ವಾಗತಿಸಿದರು. ಮಾಳಪ್ಪ ಕಿರದಳ್ಳಿ ವಂದಿಸಿದರು.




Leave a Reply

Your email address will not be published. Required fields are marked *

error: Content is protected !!