ಸಿಂದಗಿ: ಪಟ್ಟಣದಲ್ಲಿ ಮೂಲಭೂತ ಸೌಕರ್ಯಗಳು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪುರಸಭೆ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ವ್ಯವಸ್ಥಾಪಕ ಹಸನ ಡಲಾಯತ ಅವರಿಗೆ ಮನವಿ ಸಲ್ಲಿಸಲಾಯ್ತು.
ಪಟ್ಟಣದಲ್ಲಿನ ಬಿಡಾಡಿ ದನ, ನಾಯಿ, ಹಂದಿಗಳನ್ನು ಬೇರೆಡೆ ಸ್ಥಳಾಂತರಿಸುವದು. ಎಲ್ಲೆಂದರಲ್ಲಿ ರಾಶಿ ಹಾಕಿರುವ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳುವದು. ಪುರಸಭೆಯಿಂದ ಸರ್ಕಾರದ ಅನುದಾನದಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಲೋಕಾರ್ಪಣೆಗೊಳಿಸುವದು.
ಮಾಹಿತಿ ಹಕ್ಕು ಅಧಿನಿಯಮ 2005 ಕುರಿತು, ಕಚೇರಿಯಲ್ಲಿರುವ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ, ಸಾರ್ವಜನಿಕ ಮಾಹಿತಿ ಅಧಿಕಾರಿ, ಮೇಲ್ಮನವಿ ಪ್ರಾಧಿಕಾರಿ ಕುರಿತು ಮಾಹಿತಿ ನಾಮಫಲಕವನ್ನ ಕಾರ್ಯಾಲಯದಲ್ಲಿ ಅಳವಡಿಸುವದು. ಸ್ವಾಮಿ ವಿವೇಕಾನಂದ ವೃತ್ತದಿಂದ ಟಿಪ್ಪು ಸುಲ್ತಾನ್ ವೃತ್ತದವರೆಗಿನ ರಸ್ತೆಯನ್ನ ಒನ್ ವೇ ಸಂಚಾರವನ್ನಾಗಿಸುವದು ಹಾಗೂ ಪುರಸಭೆ ಕಾರ್ಯಾಲಯದಲ್ಲಿ ಸಿಬ್ಬಂದಿ ಭರ್ತಿ ಮಾಡಿಕೊಳ್ಳುವದು ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಮಾಡಲಾಗಿದೆ.
ಈ ವೇಳೆ ಸಲೀಮ ಅಲ್ದಿ, ನಾಸಿರುದ್ದೀನ ಶೇಖ, ಶಬ್ಬೀರ ಪಟೇಲ ಬಿರಾದಾರ, ಸಲೀಮ ತಾಂಬೋಳಿ, ಅನ್ವರ ಇನಾಮದಾರ ಹಾಜರಿದ್ರು.