ನವದೆಹಲಿ: ಹಿಂದುಳಿದ ವರ್ಗ ಹಾಗೂ ಪಂಗಡಕ್ಕೆ ಸಂಬಂಧಿಸಿದ 2018ರ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ನ್ಯಾಯಮೂರ್ತಿ ಅರುಣ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಎಸ್ಟಿ, ಎಸ್ಟಿ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸುವಾಗ ಪ್ರಾಥಮಿಕ ತನಿಖೆಯ ಅಗತ್ಯವಿಲ್ಲ. ಇದರ ಜೊತೆಗೆ ಹಿರಿಯ ಅಧಿಕಾರಿಗಳ ಒಪ್ಪಿಗೆ ಸಹ ಬೇಕಾಗಿಲ್ಲವೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ಮೂಲಕ ಎಸ್ಸಿ-ಎಸ್ಟಿ ಕಾಯ್ದೆ ಸಿಂಧುತ್ವನ್ನ ಎತ್ತಿ ಹಿಡಿಯಲಾಗಿದೆ.
ಈ ಕಾಯ್ದೆ ದುರುಪಯೋಗವಾಗ್ತಿದೆ ಅನ್ನೋ ಮಾತುಗಳು ಕೇಳಿ ಬಂದಿದ್ವು. ಇದಕ್ಕೆ ಸಂಬಂಧಿಸಿದಂತೆ ಒಂದಿಷ್ಟು ಅರ್ಜಿಗಳನ್ನ ಸಹ ಸಲ್ಲಿಸಲಾಗಿತ್ತು. ಅವುಗಳನ್ನ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.