ನವದೆಹಲಿ: ಶಬರಿಮಲೆ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆರ ಪ್ರವೇಶ ಅವಕಾಶಕ್ಕೆ ಇರುವ ಕಾನೂನು ತೊಡಕುಗಳ ಬಗ್ಗೆ ವಿಸ್ತೃತ ಪೀಠದ ವಿಚಾರಣೆಗೆ ಅವಕಾಶ ನೀಡುವ ಕ್ರಮವನ್ನ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಮುಖ್ಯನ್ಯಾಯಮೂರ್ತಿ ಎಸ್.ಎ ಬೊಬಡೆ ನೇತೃತ್ವದ 9 ಸದಸ್ಯರ ನ್ಯಾಯಪೀಠ, ತೀರ್ಪು ಮರುಪರಿಶೀಲಿಸುವ ಹಾಗೂ ವಿಸ್ತೃತ ಪೀಠಕ್ಕೆ ಸೂಚಿಸುವ ಅಧಿಕಾರ ಸುಪ್ರೀಂ ಕೋರ್ಟ್ ಗೆ ಇದೆ ಎಂದು ಹೇಳಿದೆ. ಶಬರಿಮಲೆ ಪ್ರಕರಣದ ವಿಚಾರಣೆ ಫೆಬ್ರವರಿ 17ಕ್ಕೆ ಶುರುವಾಗಲಿದೆ. ಇಬ್ಬರೂ ವಕೀಲರಿಗೂ ತಲಾ ಒಂದು ದಿನ ವಾದ ಮಂಡನೆಗೆ ಅವಕಾಶ ನೀಡಲಾಗ್ತಿದೆ.
ಸಂವಿಧಾನದ 25(2) (ಬಿ) ವಿಧಿ ಅನ್ವಯ ಹಿಂದು ಸಮುದಾಯಗಳು ಅರ್ಥದ ಜೊತೆಗೆ ಧಾರ್ಮಿಕ ಆಚರಣೆಗಳ ಬಗ್ಗೆಯೂ ವಿಸ್ತೃತ ನ್ಯಾಯಪೀಠ ನ್ಯಾಯಾಂಗ ತನಿಖೆ ನಡೆಸಲಿದೆ ಎಂದು ಹೇಳಿತ್ತು. ಒಂದು ಧರ್ಮಕ್ಕೆ ಸೇರಿದ ವ್ಯಕ್ತಿ ಇನ್ನೊಂದು ಧರ್ಮದ ಆಚರಣೆಗಳನ್ನ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ಪ್ರಶ್ನಿಸುವ ಅಧಿಕಾರವಿದೆಯೇ ಅನ್ನೋದರ ಕುರಿತು ಸುಪ್ರೀಂ ಸ್ಪಷ್ಟಪಡಿಸಲಿದೆ.