ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲು ಇಟ್ಟಿರುವ ಹಣವನ್ನ ಬೇರೆ ಯಾವುದಕ್ಕೂ ಬಳಸುವುದಿಲ್ಲ ಹಾಗೂ ಅದನ್ನ ವರ್ಗಾಯಿಸುವುದಿಲ್ಲವೆಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಅನುಸೂಚಿತ ಜಾತಿಗಳ ಹಾಗೂ ಪಂಗಡಗಳ ಅಭಿವೃದ್ಧಿ ಪರಿಷತ್ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತ್ನಾಡಿದ್ರು. ಎಸ್ ಸಿಪಿ ಹಾಗೂ ಟಿಎಸ್ ಸಿ ಯೋಜನೆ ಅಡಿಯಲ್ಲಿ ಮೀಸಲಿಟ್ಟ ಹಣವನ್ನ ಬೇರೆ ಇಲಾಖೆಗೆ ವರ್ಗಾವಣೆ ಮಾಡಲಾಗುತ್ತಿದೆ ಅನ್ನೋದು ಸುಳ್ಳು. ಒಂದು ರೂಪಾಯಿ ಕೂಡಾ ಬೇರೆಡೆ ವರ್ಗಾವಣೆ ಮಾಡುವುದಿಲ್ಲ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ನಮ್ಮ ಸರ್ಕಾರ ಸಾಕಷ್ಟು ಹಣ ನೀಡಿದೆ. ಇನ್ನು ನೀಡುತ್ತೇವೆ. ಆದ್ರೆ, ಆ ಇಲಾಖೆಗಳಿಗೆ ಮೀಸಲಿಟ್ಟಿರುವ ಹಣವನ್ನ ಅದಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಬಳಕೆ ಮಾಡುತ್ತೇವೆ ವಿನಃ ಬೇರೆ ಕಡೆ ಬಳಸುವುದಿಲ್ಲವೆಂದು ಹೇಳಿದರು.