ಶಾಲಾ-ಕಾಲೇಜು ಶುರುವಿಗೆ ರಾಜ್ಯ ಸರ್ಕಾರ ಚಿಂತನೆ

450

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರೋನಾ ಕಿರಿಕಿರಿ, ಲಾಕ್ ಡೌನ್ ಪರದಾಟದಿಂದಾಗಿ ಶೈಕ್ಷಣಿಕ ವರ್ಷ ಈ ಬಾರಿ ಉಲ್ಟಾ ಪಲ್ಟಾ ಆಗಿದೆ. ಶಾಲೆ-ಕಾಲೇಜು ಶುರುವಾಗದೆ ಇರುವುದ್ರಿಂದ ಹೆತ್ತವರಿಗೆ ಮಕ್ಕಳನ್ನ ಸಂಬಾಳಿಸಲು ಆಗ್ತಿಲ್ಲ. ಹೀಗಾಗಿ ಶಾಲಾ ಕಾಲೇಜುಗಳು ಯಾವಾಗ ಶುರುವಾಗ್ತವೆ ಅಂತಿದ್ದಾರೆ.

ಇದೀಗ ರಾಜ್ಯ ಸರ್ಕಾರ ಅಕ್ಟೋಬರ್ ನಲ್ಲಿ ಶಾಲಾ-ಕಾಲೇಜು ತೆರೆಯಲು ಚಿಂತನೆ ನಡೆಸಿದೆ ಎಂದು ಡಿಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಅವರು ಹೇಳಿದ್ದಾರೆ.

ವಿದ್ಯಾರ್ಥಿಗಳ ವ್ಯಾಸಂಗದ ದೃಷ್ಟಿಯಿಂದ ಶಾಲೆ, ಕಾಲೇಜು ತೆರೆಯುವುದು ಅವಶ್ಯಕವಾಗಿದೆ. ಕೇಂದ್ರ ಸರ್ಕಾರ ಈಗಾಗ್ಲೇ ಹಲವು ಕ್ಷೇತ್ರಗಳಿಗೆ ಅವಕಾಶ ನೀಡಿದೆ. ಅದೆ ರೀತಿ ಅಕ್ಟೋಬರ್ ನಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಮಾರ್ಗಸೂಚಿ ಹೊರಡಿಸಬೇಕಿದೆ. ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ರೆ ಅಕ್ಟೋಬರ್ ನಲ್ಲಿಯೇ ಶಾಲಾ, ಕಾಲೇಜು ಆರಂಭಿಸುವ ಪ್ಲಾನ್ ಎಂದು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!