ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಶರಾವತಿ ಅಣೆಕಟ್ಟೆ ನಿರ್ಮಾಣದಿಂದ ಮುಳಗಡೆಗೊಂಡಿರುವ ಸಂತ್ರಸ್ತರಿಗೆ ಜಮೀನು ನೀಡಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಶುಕ್ರವಾರ ಉನ್ನತ ಮಟ್ಟದ ಸಭೆ ನಡೆಸಿದ್ರು. ಈ ವೇಲೆ 9,773 ಎಕರೆ ಜಮೀನು ಮಂಜೂರು ಮಾಡಲು ನಿರ್ದೇಶನ ನೀಡಿದ್ರು.
ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಸರ್ವೇ ಮಾಡುವಂತೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಜಮೀನುಗಳ ಗಡಿ ಗುರುತಿಸಿ ಸಂತ್ರಸ್ತ ಕುಟುಂಬಗಳು ವ್ಯವಸಾಯ ಮಾಡ್ತಿರುವ ಜಮೀನುಗಳನ್ನ ಅವರ ಹೆಸರಿಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಹೇಳಿದ್ರು.
ಸಾಗರ, ಸೊರಬ, ಹೊಸನಗರ, ಶಿಕಾರಿಪುರ, ತೀರ್ಥಹಳ್ಳಿ ಸೇರಿದಂತೆ ಸುತ್ತಮುತ್ತ ತಾಲೂಕಿನ ಜನರಿಗೆ ಸಾಗುವಳಿ ಮಾಡ್ತಿರುವ ಜಮೀನು ಅವರ ಹೆಸರಿಗೆ ಮಾಡುವ ಸಂಬಂಧ ಸಭೆ ನಡೆಸಲಾಯ್ತು.