ಮುಂಬೈ: ರಾತ್ರೋರಾತ್ರಿ ಅಚ್ಚರಿಯ ಬೆಳವಣಿಗೆಯಿಂದ ಕಂಗಾಲಾದ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ, ಅಜಿತ ಪವಾರ ನಿರ್ಧಾರಕ್ಕೆ ನಮ್ಮ ಬೆಂಬಲವಿಲ್ಲ ಎಂದು ಹೇಳಿದ್ದಾರೆ. ಶಿವಸೇನೆ ಮುಖ್ಯಸ್ಥೆ ಉದ್ಧವ್ ಠಾಕ್ರೆ ಹಾಗೂ ಶರದ್ ಪವಾರ ಜಂಟಿಯಾಗಿ ಮಾಧ್ಯಮಗೋಷ್ಠಿ ನಡೆಸಿದ್ರು.
ಈ ವೇಳೆ ಮಾತ್ನಾಡಿದ ಶರದ್ ಪವಾರ, ಅಜಿತ ಪವಾರ ನಿರ್ಧಾರಕ್ಕೆ ನಮ್ಮ ಬೆಂಬಲವಿಲ್ಲ. ಅವರ ಈ ಕೆಲಸಕ್ಕೆ ಕಾರ್ಯಕರ್ತರಿಗೆ ನೋವಾಗಿದೆ ಅಂತಾ ಹೇಳಿದ್ರು. ಅಲ್ದೇ, ಅವರ ನಿರ್ಧಾರ ಪಕ್ಷದ ನೀತಿಗೆ ವಿರುದ್ಧವಾಗಿದೆ. ಸರ್ಕಾರ ರಚನೆಗೆ ಬಿಜೆಪಿ ಯಾವಾಗಲೂ ಕುದುರೆ ವ್ಯಾಪ್ಯಾರ ನಡೆಸ್ತಿತ್ತು. 10ರಿಂದ 11ಜನ ಶಾಸಕರು ಅಜಿತ ಜೊತೆ ಹೋಗಿದ್ದಾರೆ ಅಂತಾ ತಿಳಿಸಿದ್ರು.
ಎನ್ ಸಿಪಿ, ಶಿವಸೇನೆ ಹಾಗೂ ಕಾಂಗ್ರೆಸ್ ಸೇರಿಕೊಂಡು ಸರ್ಕಾರ ರಚನೆ ಮಾಡಲು ನಿರ್ಧರಿಸಲಾಗಿತ್ತು. ಇದಕ್ಕೆ ಮೂರು ಪಕ್ಷದ ಶಾಸಕರು ಒಪ್ಪಿಕೊಂಡಿದ್ರು. ನಿಜವಾದ ಕಾರ್ಯಕರ್ತರು ಯಾರೂ ಬಿಜೆಪಿ ಜೊತೆ ಹೋಗಲು ಸಾಧ್ಯವಿಲ್ಲವೆಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ ಹೇಳಿದ್ದಾರೆ.
ಇನ್ನು ಇದಕ್ಕೂ ಮೊದ್ಲು ಎನ್ ಸಿಪಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ಅಜಿತ ಪವಾರ ಅವರನ್ನ ವಜಾ ಮಾಡಿ ಶರದ ಪವಾರ ಆದೇಶಿಸಿದ್ದಾರೆ. ಈ ಮೂಲಕ ಅಜಿತಗೆ ಬಿಸಿ ಮುಟ್ಟಿಸಿದ್ದಾರೆ.