ಮೇಲುಕೋಟೆ: ಲಾಕ್ ಡೌನ್ ಇರೋದ್ರಿಂದ ಮದ್ಯ ಮಾರಾಟಕ್ಕೂ ಬ್ರೇಕ್ ಹಾಕಲಾಗಿದೆ. ಮದ್ಯ ಪ್ರಿಯರು ಎಷ್ಟೇ ಹೇಳಿದ್ರೂ ಸರ್ಕಾರ ಮಾತ್ರ ನೋ ಡ್ರಿಂಕ್ಸ್ ಅಂತಿದೆ. ಆದ್ರೆ, ಮಂಡ್ಯದಲ್ಲಿ ಸೀಲ್ ಹಾಕಿದ ಬಾರ್ ಕೀ ತೆಗೆದು ಮದ್ಯ ಮಾರಾಟ ಮಾಡಿದ ಆರೋಪ ಕೇಳಿ ಬರ್ತಿದೆ.
ಮೇಲುಕೋಟೆ ಸುಂಕತೊಣ್ಣುರು ಗ್ರಾಮದ ಧನಲಕ್ಷ್ಮೀ ಬಾರ್ ಸೀಲ್ ಓಪನ್ ಮಾಡಲಾಗಿದೆ. ಹಾಗೂ ಜಕ್ಕನಹಳ್ಳಿ ಗ್ರಾಮದಲ್ಲೂ ಮದ್ಯ ಮಾರಾಟ ಮಾಡಿದ ಶೆಂಕೆ ವ್ಯಕ್ತವಾಗಿದೆ. ಅಬಕಾರಿ ಇಲಾಖೆ ಹಾಕಿದ ಸೀಲ್ ತೆಗೆದು ಗಾಯದ ಸ್ಟೀಕರ್ ಹಾಕಿದ್ದು, ಮದ್ಯ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದು ನಿಜವೋ ಸುಳ್ಳೋ ಅನ್ನೋದರ ತನಿಖೆಯಾಗಬೇಕಿದೆ.
ಇಷ್ಟೆಲ್ಲ ಬೆಳವಣಿಗೆ ನಡೆದ್ರೂ ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪೊಲೀಸ್ ಅಧಿಕಾರಿಗಳು ಕೈಕಟ್ಟಿ ಕುಳಿತ್ತಿದಾರೆ ಎಂದು ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದಾರೆ.