ಬೆಂಗಳೂರು: ನಗರದ ಪಾದರಾನಪುರಪುರದಲ್ಲಿ ನಡೆದ ಗಲಾಟೆ ಸಂಬಂಧ, ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಅಲ್ಪಸಂಖ್ಯಾತ ಮುಖಂಡರ ಸಭೆ ನಡೆಸಲಾಗ್ತಿದೆ. ಸದಾಶಿವನಗರದಲ್ಲಿರುವ ಮನೆಯಲ್ಲಿ ಅಲ್ಪಸಂಖ್ಯಾತ ಮುಖಂಡರ ಸಭೆ ನಡೆಸಲಾಗ್ತಿದೆ.
ಕೆಪಿಸಿಸಿ ಕಾರ್ಯದರ್ಶಿ ಸಲೀಂ ಅಹ್ಮದ, ಶಾಸಕ ಎನ್.ಎ ಹ್ಯಾರಿಸ್, ಜಮೀರ ಅಹ್ಮದಖಾನ, ಸಿಎಂ ಇಬ್ರಾಹಿಂ ಸೇರಿದಂತೆ ಹಲವು ಅಲ್ಪ ಸಂಖ್ಯಾತರ ಸಭೆ ನಡೆಸಲಾಗ್ತಿದೆ. ಕ್ವಾರಂಟೈನ್ ಮಾಡಲು ವೈದ್ಯಕೀಯ ಸಿಬ್ಬಂದಿ ಹಾಗೂ ಬಿಬಿಎಂಪಿ ಅಧಿಕಾರಿಗಳು ತೆರಳಿದ ವೇಳೆ ನಡೆದ ಗಲಾಟೆಗೆ ಕಾರಣವೇನು? ಇದರ ಹಿಂದೆ ಇರೋದ್ಯಾರು ಅನ್ನೋದು ಸೇರಿದಂತೆ ಹಲವು ಪ್ರಮುಖ ವಿಚಾರಗಳ ಚರ್ಚೆ ನಡೆಸಲಾಗ್ತಿದೆ.