ಕಿಡಿ‘ಹೇಡಿ’ಗಳಿಗೆ ದಂಡಂ ದಶಗುಣಂ ಸರಿಯೆಂದ ಸಿಎಂ

351

ಬೆಂಗಳೂರು: ಕರೋನಾ ಲಾಕ್ ಡೌನ್ ವಿಚಾರದಲ್ಲಿ ಕಿಡಿಗೇಡಿಗಳಿಗೆ ಇನ್ಮುಂದೆ ಕಠಿಣ ಕ್ರಮ ತೆಗದುಕೊಳ್ಳಲಾಗುವುದು. ಪೊಲೀಸರಿಗೆ ಪವರ್ ಫುಲ್ ಅವಕಾಶ ನೀಡಲಾಗಿದೆ. ಇನ್ಮುಂದೆ ಸಾಪ್ಟ್ ಕಾರ್ನರ್ ಇಲ್ಲವೆಂದು ಸಿಎಂ ಹೇಳಿದ್ದಾರೆ.

ಇಂದು ನಡೆದ ಸಚಿವ ಸಂಪುಟದಲ್ಲಿ ಸಚಿವರು ಘಟನೆ ಬಗ್ಗೆ ಫುಲ್ ಗರಂ ಆಗಿದ್ದು, ಈ ಹಿಂದೆ ಸಾದಿಕ್ ನಗರದಲ್ಲಿ ನಡೆದ ಗಲಾಟೆಯಿಂದ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು ಅನ್ನೋ ಮಾತುಗಳು ಕೇಳಿ ಬಂದಿವೆ. ಹೀಗಾಗಿ ಇನ್ಮುಂದೆ ಕಿಡಿಗೇಡಿಗಳ ವಿರುದ್ಧ ದಂಡಂ ದಶಗುಣಂ ಎಂದಿದ್ದಾರೆ ಸಿಎಂ ಬಿ.ಎಸ್ ಯಡಿಯೂರಪ್ಪನವರು.

ಶಾಸಕ ಜಮೀರ ವಿರುದ್ಧ ಸಿಎಂ ಗರಂ ಆಗಿದ್ದು, ಸರ್ಕಾರ ಮಾಡುವ ಕೆಲಸಕ್ಕೆ ಜಮೀರ ಕೇಳಬೇಕೆ. ಅವರು ಯಾರು? ಜಮೀರ ಹೇಳಿಕೆ ನೋಡಿದ್ರೆ,  ಗಲಭೆಗೆ ಇವರೆ ಪ್ರಚಾರ ನೀಡ್ತಿದ್ದಾರೆ ಎಂದು ಭಾವಿಸಬೇಕೇ ಎಂದು ಕೇಳಿದ್ದಾರೆ.

ರಾತ್ರಿ ಹೋಗುವ ಬದಲು ಬೆಳಗ್ಗೆ ಹೋಗಿದ್ದರೆ ಗಲಾಟೆ ಆಗ್ತಿರ್ಲಿಲ್ಲವೆಂದು ಶಾಸಕ ಜಮೀರ ಅಹ್ಮದ ಖಾನ ಹೇಳಿದ್ದಾರೆ. ನಾನು ಬಿಬಿಎಂಪಿ ಆಯುಕ್ತರಿಗೆ ಹೇಳಿದ್ದೆ. ರಾತ್ರಿ ಹೋಗುವುದು ತಪ್ಪಲ್ಲ. ಆದ್ರೆ, ಅದು ಗಮನಕ್ಕೆ ತರಬೇಕಿತ್ತು ಎಂದು ಹೇಳುವ ಮೂಲಕ ಜಮೀರು ನಡೆ ಏನು ಅನ್ನೋದು ತೋರಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!