ಪ್ರಜಾಸ್ತ್ರ ಸುದ್ದಿ
ಕಾರವಾರ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕಾರ್ಯದರ್ಶಿ ಎನ್.ಆರ್ ಸಂತೋಷ ಆತ್ಮಹತ್ಯೆಗೆ ಪರ್ಸನಲ್ ವಿಡಿಯೋ ಕಾರಣ. ಅವರನ್ನ, ಸಿಎಂ ಅವರನ್ನ ಬ್ಲ್ಯಾಕ್ ಮೇಲ್ ಮಾಡಲಾಗ್ತಿತ್ತು. ಪರ್ಷನಲ್ ವಿಡಿಯೋ ಮಂತ್ರಿ ಹಾಗೂ ಎಂಎಲ್ ಸಿ ಒಬ್ಬರಿಗೆ ನೀಡಲಾಗಿದ್ದು ಅದು ದೆಹಲಿ ನಾಯಕರಿಗೆ ತಲುಪಿದೆ ಎಂದು ಆರೋಪಿಸಿದ್ದಾರೆ.
ಡಿಕೆಶಿ ಹೇಳಿಕೆಗೆ ಸಚಿವರಾದ ಆರ್.ಅಶೋಕ ಹಾಗೂ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಡಿಕೆಶಿ ಹೇಳಿಕೆ ಕಪೋಕಲ್ಪಿತ. ಸುಳ್ಳು ಆಪಾಧನೆ ಮಾಡುತ್ತಲೇ ಇರ್ತಾರೆ. ಎಲ್ಲದರಲ್ಲೂ ಆರೋಪ ಮಾಡ್ತಾರೆ. ನಿಗಮ ಮಂಡಳಿ ವಿಚಾರದಲ್ಲಿಯೂ ಆರೋಪ ಮಾಡಿದ್ರು ಎಂದು ಆರ್.ಅಶೋಕ ವಾಗ್ದಾಳಿ ನಡೆಸಿದ್ರು.
ಇನ್ನು ಕೆ.ಎಸ್ ಈಶ್ವರಪ್ಪ ಮಾತ್ನಾಡಿ, ಡಿಕೆಶಿ ಅವರ ಬಳಿ ವಿಡಿಯೋ ಇದ್ರೆ ಬಹಿರಂಗ ಮಾಡಲಿ. ಕಡೆ ಪಕ್ಷ ಬ್ಲ್ಯಾಕ್ ಮೇಲ್ ಮಾಡ್ತಿರುವ ಸಚಿವ, ಎಂಎಲ್ ಸಿ ಹೆಸರನ್ನಾದ್ರೂ ಹೇಳಲಿ. ರಾಜ್ಯದಲ್ಲಿ ಬಿಜೆಪಿಗೆ 1 ಕೋಟಿ ಕಾರ್ಯಕರ್ತರು ಇದ್ದಾರೆ. ಸಂತೋಷ ಮನೆಯಲ್ಲಿ ಏನು ರಾಜಕೀಯ ಇದೆ ಯಾರಿಗೆ ಗೊತ್ತು. ಡಿಕೆಶಿ ಹೇಳಿಕೆ ಮುಠ್ಠಾಳತನದಿಂದ ಕೂಡಿದೆ ಎಂದು ವಾಗ್ದಾಳಿ ನಡೆಸಿದ್ರು.