ಪ್ರಜಾಸ್ತ್ರ ಸುದ್ದಿ
ಕಾರವಾರ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕಾರ್ಯದರ್ಶಿ ಸಂತೋಷ ಆತ್ಮಹತ್ಯೆ ಪ್ರಯತ್ನಕ್ಕೆ, ಅವರ ಪರ್ಸನಲ್ ವಿಡಿಯೋ ಕಾರಣ ಅನ್ನೋ ಮಾಹಿತಿ ನನಗೆ ಸಿಕ್ಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಆರೋಪಿಸಿದ್ದಾರೆ.
ಎನ್.ಆರ್ ಸಂತೋಷ ಪರ್ಸನಲ್ ವಿಡಿಯೋ ಮಾಡಿ ಸಚಿವ ಹಾಗೂ ಎಂಎಲ್ ಸಿ ಒಬ್ಬರಿಗೆ ನೀಡಲಾಗಿದೆ. ಅದನ್ನ ದೆಹಲಿ ನಾಯಕರಿಗೆ ತಿಂಗಳುಗಳ ಹಿಂದೆಯೇ ಕೊಟ್ಟಿರುವ ಬಗ್ಗೆ ಮಾಹಿತಿ ಇದೆ. ಇದ್ರಿಂದ ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಬಹುದು ಎಂದು ಡಿಕೆ ಶಿವಕುಮಾರ ಹೇಳಿದ್ದಾರೆ.
ಇನ್ನು ಸಂತೋಷ ಆತ್ಮಹತ್ಯೆ ಪ್ರಯತ್ನದ ವಿರುದ್ಧ ಬೆಂಗಳೂರಿನ ಸದಾಶಿವ ನಗರ ಪೊಲೀಸರು 309ರ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದಾರೆ. ಪತ್ನಿ ಜಾಹ್ನವಿಯಿಂದ ಹೇಳಿಕೆ ಪಡೆದಿರುವ ಪೊಲೀಸರು, ನನ್ನ ಹಾಗೂ ಪತಿ ನಡುವೆ ಭಿನ್ನಾಭಿಪ್ರಾಯ ಇರಲಿಲ್ಲ. ಇತ್ತೀಚೆಗೆ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ರು. ಹೀಗಾಗಿ ನಿದ್ದೆ ಮಾತ್ರೆ ತೆಗೆದುಕೊಳ್ತಿದ್ರು ಎಂದು ಹೇಳಿದ್ದಾರೆ.