ಕ್ವಾರಂಟೈನ್ ಭೀತಿ: ಆತ್ಮಹತ್ಯೆಗೆ ಯತ್ನ

372

ಬಾಗಲಕೋಟೆ: ಕ್ವಾರಂಟೈನ್ ನಲ್ಲಿರಬೇಕಾಗುತ್ತೆ ಅನ್ನೋ ಭಯದಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಎರಡು ವಾರಗಳ ಕಾಲ ಕ್ವಾರಂಟೈನ್ ಭಯಕ್ಕೆ ಚಿಕ್ಕೂರು ಗ್ರಾಮದಲ್ಲಿ 40 ವರ್ಷದ ತುಕಾರಂ ಲಮಾಣಿ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಮಹಾರಾಷ್ಟ್ರದಲ್ಲಿ ದಿನಗೂಲಿ ಕೆಲಸಕ್ಕೆ ಹೋಗಿದ್ದ. ಅಲ್ಲಿಂದ ವಾಪಸ್ ಬಂದಿದ್ದ ಆತನನ್ನ ಮೇ 15ರಂದು ಭೇಟಿಯಾದ ಆಶಾ ಕಾರ್ಯಕರ್ತೆಯರು 14 ದಿನಗಳ ಕಾಲ ಕ್ವಾರಂಟೈನ್ ಆಗಬೇಕೆಂದು ಸೂಚಿಸಿದ್ರು. ಕರೋನಾ ಪರೀಕ್ಷೆ ಭಯಕ್ಕೆ ಹೆದರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈತನನ್ನ ಮುಧೋಳ ಆಸ್ಪತ್ರೆಗೆ ದಾಖಲಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!