ಕ್ರೇನ್ ದುರಂತ: 10 ಕಾರ್ಮಿಕರ ಸಾವು

328

ಪ್ರಜಾಸ್ತ್ರ ಸುದ್ದಿ

ವಿಶಾಖಪಟ್ಟಣಂ: ಬೃಹತ್ ಗಾತ್ರದ ಕ್ರೇನ್ ವೊಂದು ಕುಸಿದುಬಿದ್ದ ಪರಿಣಾಮ 10 ಜನ ಕಾರ್ಮಿಕರು ಸಾವನ್ನಪ್ಪಿದ್ದ ಘಟನೆ ನಡೆದಿದೆ. ಅಲ್ದೇ, ಹಲವಾರು ಜನರಿಗೆ ಗಾಯಗಳಾಗಿವೆ. ಈ ಬಗ್ಗೆ ವಿಶಾಕಪಟ್ಟಣಂ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಹಿಂದೂಸ್ಥಾನ್ ಶಿಪ್ ಯಾರ್ಡ್ ನಲ್ಲಿ ಕೆಲಸ ಮಾಡ್ತಿದ್ದ ವೇಳೆ ಕ್ರೇನ್ ಕುಸಿದುಬಿದ್ದು 10 ಜನ ಕಾರ್ಮಿಕರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸ್ರು, ರಕ್ಷಣ ತಂಡ ಆಗಮಿಸಿದ್ದು, ಕ್ರೇನ್ ಅಡಿಯಲ್ಲಿ ಸಿಲುಕಿರುವವರ ರಕ್ಷಣೆ ಕಾರ್ಯ ನಡೆಸಲಾಗ್ತಿದೆ. ಸಾವಿನ ಸಂಖ್ಯೆ ಏರುವ ಲಕ್ಷಣಗಳಿವೆ ಎಂದು ಹೇಳಲಾಗ್ತಿದೆ.

ಅನಿಲ ದುರಂತದ ನೆನಪುಗಳು ಮಾರೆಯಾಗಿಲ್ಲ. ಇದೀಗ ಮತ್ತೊಂದು ದುರಂತ ಸಂಭವಿಸಿದೆ.




Leave a Reply

Your email address will not be published. Required fields are marked *

error: Content is protected !!