ಪ್ರಜಾಸ್ತ್ರ ಸುದ್ದಿ
ವಿಶಾಖಪಟ್ಟಣಂ: ಕಳೆದ ಶನಿವಾರ ಸಂಭವಿಸಿದ ಕ್ರೇನ್ ದುರಂತಕ್ಕೆ ಸಂಬಂಧಿಸಿದಂತೆ ಹಿಂದೂಸ್ಥಾನ್ ಶಿಪ್ ಯಾರ್ಡ್ ಲಿಮಿಟೆಡ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಮಾತ್ನಾಡಿದ್ದಾರೆ. ಮೃತ ಕುಟುಂಬಸ್ಥರಿಗೆ 50 ಲಕ್ಷ ರೂಪಾಯಿ ನೀಡುವುದಾಗಿ ಶರತಬಾಬು ತಿಳಿಸಿದ್ದಾರೆ.
ಕ್ರೇನ್ ಲೋಡ್ ಸಾಮರ್ಥ್ಯ ಪರೀಕ್ಷೆ ನಡೆಸುವ ಟೈಂನಲ್ಲಿ ಆಗಸ್ಟ್ 1ರಂದು ಎಚ್ಎಸ್ಎಲ್ ನಲ್ಲಿ ನಡೆದ ದುರಂತದಲ್ಲಿ 11 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ.