ಪ್ರಜಾಸ್ತ್ರ ಅಪರಾಧ ಸುದ್ದಿ
ಬೆಂಗಳೂರು: ನಾದಿನಿಯನ್ನ ಪ್ರೀತಿಸುವಂತೆ ಪೀಡಿಸ್ತಿದ್ದ ವ್ಯಕ್ತಿಯೊಬ್ಬ ಆಕೆ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾನೆ. ಬಳಿಕ ತಾನೂ ವಿಷ ಸೇವಿಸಿ ಸಾವನ್ನಪ್ಪಿರುವ ಘಟನೆ ನಗರದ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಫುಡ್ ಡೆಲಿವರಿ ಬಾಯ್ 32 ವರ್ಷದ ನಾಗರಾಜ, ನಾದಿನಿಯನ್ನ ಪ್ರೀತಿಸುವಂತೆ ಕಿರುಕುಳ ಕೊಟ್ಟಿದ್ದಾನೆ. ನಿನ್ನನ್ನ ಮದುವೆಯಾಗುತ್ತೇನೆ ಎಂದು ಪೀಡಸ್ತಿದ್ದನಂತೆ. ಇದಕ್ಕ ಒಪ್ಪದ ಆಕೆಯ ಮೇಲೆ ಕಳೆದ ನವೆಂಬರ್ 25ರಂದು ಚಾಕುವಿನಿಂದ 9 ಕಡೆ ಹಲ್ಲೆ ಮಾಡಿದ್ದಾನೆ. ಬಳಿಕ ತಾನು ವಿಷ ಸೇವಿಸಿ ಮನೆಯಿಂದ ಎಸ್ಕೇಪ್ ಆಗಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ಯುವತಿಯ ಚೀರಾಟ ಕೇಳಿ ನೆರೆ ಹೊರೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಯುವತಿ ಹೇಳಿಕೆ ಆಧರಿಸಿ ನಾಗರಾಜ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಆದ್ರೆ, ವಿಷ ಸೇವಿಸಿ ಮನೆಯಿಂದ ಹೊರ ಹೋಗಿದ್ದ ನಾಗರಾಜ, ರೈತರ ಸಂತೆ ಬಳಿ ಬಿದ್ದು ಸಾವನ್ನಪ್ಪಿದ್ದಾನೆ. ಪೊಲೀಸರು ಬಂದು ತನಿಖೆ ನಡೆಸಿದಾಗ ಅದು ನಾಗರಾಜ ಮೃತದೇಹವೆಂದು ಖಚಿತ ಪಡಿಸಿದ್ದಾರೆ.
ಕಟ್ಟಿಗೇನಹಳ್ಳಿಯಲ್ಲಿ ಯುವತಿ, ತಾಯಿ ಸೇರಿದಂತೆ ಅಕ್ಕ ಹಾಗೂ ಭಾವ ಒಂದೇ ಮನೆಯಲ್ಲಿ ವಾಸವಾಗಿದ್ರು. ನಾಗರಾಜ ಯುವತಿ ಮೇಲೆ ಕಣ್ಣಾಕಿದ್ದ. ಆಗಾಗ ಆಕೆಗೆ ಕಿರುಕುಳ ಕೊಡ್ತಿದ್ದ. ಮದುವೆಯಾಗು ಎಂದು ಪೀಡಿಸ್ತಿದ್ದ. ಬುದ್ದಿ ಹೇಳಿದ ನಾದಿನಿಗೆ ಇರಿದು ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ.