ಶ್ರೀಶೈಲಕ್ಕೆ ಹೊರಟ ಭಕ್ತರು

218

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಹೋಳಿ ಹುಣ್ಣಿಮೆ ಮುಗಿದ ನಂತರ ಉತ್ತರ ಕರ್ನಾಟಕ ಭಾಗದಲ್ಲಿ ಶ್ರೀಶೈಲಕ್ಕೆ ಹೋಗಲಾಗುತ್ತೆ. ಅನೇಕ ಭಕ್ತರು ಕಾಲ್ನಡಿಗೆಯ ಮೂಲಕ ಹೋಗುತ್ತಾರೆ. ಇಂದು ಭಕ್ತರು ಪಟ್ಟಣದ ಸಂಗಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಲ್ಲಯ್ಯನ ದರ್ಶನ ಪಡೆಯಲು ಹಜ್ಜೆ ಹಾಕಿದ್ದಾರೆ.

ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿರುವ ಭಕ್ತರು ವಾಹನಗಳು ಹಾಗೂ ಕಾಲ್ನಡಿಗೆಯ ಮೂಲಕ ಶ್ರೀಶೈಲಕ್ಕೆ ತೆರಳುತ್ತಾರೆ. ಸುಮಾರು 40ಕ್ಕೂ ಹೆಚ್ಚು ದಿನಗಳ ಕಾಲ ಉಪವಾಸ ಮಾಡಲಾಗುತ್ತೆ. ಇನ್ನು ಇದಕ್ಕೂ ಪೂರ್ವದಲ್ಲಿ ಕಂಬಿಗಳನ್ನು ಹೊತ್ತು ಎಲ್ಲ ಮನೆಗಳಿಗೆ ತೆರಳಿ ಭಕ್ತರಿಂದ ಪೂಜೆ ಮಾಡಲಾಗುತ್ತೆ.




Leave a Reply

Your email address will not be published. Required fields are marked *

error: Content is protected !!