Search

ಮಾದಪ್ಪನ ಭಕ್ತರಿಗೆ ಅವಮಾನ ಆಗಲಿಲ್ಲವೇ? ರಿಷಭ್ ಗೆ ಪ್ರಶ್ನೆ

291

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ, ನಿರ್ದೇಶಕ ರಿಷಭ್ ಶೆಟ್ಟಿಗೆ ಮಾದಪ್ಪನ ಭಕ್ತರು ಪ್ರಶ್ನೆ ಮಾಡುತ್ತಿದ್ದಾರೆ. ಕಾಂತಾರ ಚಿತ್ರದಲ್ಲಿನ ಓಓಓಓ ಎಂದು ಹೇಳುವ ಮೂಲಕ ದೈವಕ್ಕೆ ಅವಮಾನ ಮಾಡಬೇಡಿ ಎಂದು ರಿಷಭ್ ಶೆಟ್ಟಿ ಹೇಳಿದ್ದಾರೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಹಲವರಿಂದ ಪರ-ವಿರೋಧದ ಮಾತುಗಳು ಕೇಳಿ ಬಂದಿವೆ.

ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ಕೊಲೆ ಮಾಡುವ ದೃಶ್ಯಕ್ಕೆ ಸೂಜುಗಾದ ಸೂಜು ಮಲ್ಲಿಗೆ ಹಾಡು ಸೇರಿಸಿದಾಗ ಮಾದಪ್ಪನ ಭಕ್ತರಿಗೆ ಅವಮಾನ ಆಗಲಿಲ್ಲವೇ ಎಂದು ಪ್ರಶ್ನಿಸುವ ಮೂಲಕ ವಾಗ್ದಾಳಿ ನಡೆಸಲಾಗಿದೆ.

ಹೀಗೆ ಹಲವರು ಹಲವು ರೀತಿಯಲ್ಲಿ ಟ್ವೀಟ್ ಮಾಡುವ ಮೂಲಕ ರಿಷಭ್ ಶೆಟ್ಟಿಗೆ ಪ್ರಶ್ನಿಸಿದ್ದಾರೆ. ಹಲವರು ರಿಷಭ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!