ಟಿಪ್ಪು ಹೆಸರು ಬದಲಾಯಿಸಿದ್ದು ರಾಜಕೀಯಕ್ಕಾಗಿ: ಎಚ್.ಡಿ ರೇವಣ್ಣ

172

ಪ್ರಜಾಸ್ತ್ರ ಸುದ್ದಿ

ಹಾಸನ: ಕೇಂದ್ರ ರೈಲ್ವೆ ಇಲಾಖೆಯಿಂದ ಟಿಪ್ಪು ಎಕ್ಸ್ ಪ್ರೆಸ್ ಟ್ರೇನ್ ಹೆಸರು ಬದಲಾಯಿಸಿ ಒಡೆಯರ್ ಎಂದು ಮರುನಾಮಕರಣ ಮಾಡಲಾಗಿದೆ. ಇದಕ್ಕೆ ರಾಜಕಾರಣಿಗಳಿಂದ ಹಿಡಿದು ರಾಜಕೀಯ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಟಿಪ್ಪು ಹೆಸರು ಬದಲಾಯಿಸಿದ್ದು ರಾಜಕೀಯ ಗಿಮಿಕ್ ಎಂದು ಜೆಡಿಎಸ್ ಮಾಜಿ ಸಚಿವ ಎಚ್.ಡಿ ರೇವಣ್ಣ ಹೇಳಿದ್ದಾರೆ.

ಈ ಹಿಂದೆ ಯಾರೋ ಪುಣ್ಯಾತ್ಮರು ಟಿಪ್ಪು ಹೆಸರು ಇಟ್ಟಿದ್ದರು. ಆ ಹೆಸರು ಹಾಗೇ ಬಿಟ್ಟು ಮೈಸೂರಿಗೆ ಓಡಾಡುವ ಹಲವು ಟ್ರೇನ್ ಗಳಿವೆ. ಯಾವುದಾದರೂ ರೈಲಿಗೆ ಒಡೆಯರ್ ಹೆಸರು ಇಡಬಹುದಿತ್ತು. ರಾಜ್ಯ ಬಿಜೆಪಿ ಸರ್ಕಾರ ದುಡ್ಡು ಹೊಡೆಯುವುದು, ಸಮಾಜವನ್ನು ಗುರಿಯಾಗಿಟ್ಟು ಕೆಲಸ ಮಾಡೋದನ್ನೇ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಘೋಷಣೆ ಮಾಡಿರುವ ರೈಲುಗಳನ್ನು ಸಂಚರಿಸುವ ತಾಕತ್ತು ಇಲ್ಲದವರು, ಬರೀ ಹೆಸರು ಬದಲಾವಣೆ ಮಾಡುತ್ತಾ ಹೋಗುತ್ತಾರೆ. ಇದರಿಂದ ಇತಿಹಾಸ ಬದಲಿಸಲು ಸಾಧ್ಯವಿಲ್ಲವೆಂದು ಸಾರ್ವಜನಿಕರು ಟ್ವೀಟರ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಆ ಭಾಗದ ಬಿಜೆಪಿ ಸಂಸದರು ಸೇರಿ ಕೇಂದ್ರ ಸಚಿವರ ವಿರುದ್ಧ ಕಿಡಿ ಕಾರಿದ್ದಾರೆ.




Leave a Reply

Your email address will not be published. Required fields are marked *

error: Content is protected !!