ಖಜಾನೆ ಖಾಲಿಯಾಗಿದೆ.. ಸಿಎಂ, ಸಚಿವರ ಜೇಬಿಗೆ ದುಡ್ಡು ಹೋಯಿತಾ?

241

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸರ್ಕಾರ ಖಜಾನೆ ಖಾಲಿಯಾಗಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಹೀಗಾಗಿ 90 ಸಾವಿರ ಕೋಟಿ ರೂಪಾಯಿ ಸಾಲ ಮಾಡಲು ಹೊರಟಿದೆ. ಹಾಗಾದ್ರೆ, ದುಡ್ಡು ಸಿಎಂ ಹಾಗೂ ಸಚಿವರ ಜೇಬಿಗೆ ಹೋಯಿತಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಇವರು, ಸರ್ಕಾರದ ಸಮೀಕ್ಷೆಯಂತೆ ಕಳೆದ ವರ್ಷ ನೆರೆಯಿಂದ 2 ಲಕ್ಷದ 24 ಸಾವಿರ ಮನೆಗಳಿಗೆ ಹಾನಿಯಾಗಿದೆ. ಪರಿಹಾರ ಮಾತ್ರ 1 ಲಕ್ಷದ 24 ಸಾವಿರ ಮನೆಗಳಿಗೆ ಎಂದು ಕೇಂದ್ರಕ್ಕೆ ವರದಿ ಕಳುಹಿಸಿದೆ. ಹೀಗಿರುವಾಗ ಈ ವರ್ಷ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡುವುದು ಯಾವಾಗ ಎಂದಿದ್ದಾರೆ.

ಕಳೆದ ವರ್ಷ ಕೇಂದ್ರಕ್ಕೆ ಕೇಳಿದ್ದು 35 ಸಾವಿರ ಕೋಟಿ ಪರಿಹಾರ. ಅವರು ಕೊಟ್ಟಿದ್ದು 1,654 ಕೋಟಿ ರೂಪಾಯಿ. ಈ ವರ್ಷ 4 ಸಾವಿರ ಕೋಟಿ ಕೇಳಿದ್ದಾರೆ. ಯಾಕೆ ಕೇಂದ್ರಕ್ಕೆ ಪರಿಹಾರ ಕೇಳಲು ಭಯವೇ ಎಂದು ವಾಗ್ದಾಳಿ ನಡೆಸಿದ್ದಾರೆ. ಹೀಗೆ ಸರಣಿ ಟ್ವೀಟ್ ಮಾಡಿ ಯಡಿಯೂರಪ್ಪನವರೆ ಉತ್ತರ ಕೊಡಿ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!