ಬಸ್-ಗೂಡ್ಸ್ ವಾಹನ ನಡುವಿನ ಅಪಘಾತಕ್ಕೆ ಮೂವರ ಸಾವು

367

ಬಳ್ಳಾರಿ: ಸರ್ಕಾರಿ ಬಸ್ ಹಾಗೂ ಗೂಡ್ಸ್ ವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿದ ಘಟನೆ ಕೂಡ್ಲಗಿ ಬಳಿಯ ರಾಷ್ಟ್ರೀಯ ಹೆದ್ಧರಿ 50ರಲ್ಲಿ ನಡೆದಿದೆ.

ಟೊಮ್ಯಾಟ್ ತುಂಬಿಕೊಂಡು ಕೊಡ್ಲಿಗಿ ಮಾರುಕಟ್ಟೆಗೆ ಹೊರಟಿದ್ದ ಗೂಡ್ಸ್ ವಾಹನ ಹಾಗೂ ಸರ್ಕಾರಿ ಬಸ್ ನಡುವೆ ನಡೆದ ಅಪಘಾತದಲ್ಲಿ ಚಾಲಕ ಪ್ರಕಾಶ, ನಾಗರಾಜ, ಮತ್ತು ನಾಗಮ್ಮ ಎಂಬುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು ತೀವ್ರ ಗಾಯಗೊಂಡಿದ್ದ ಗುರು ಎಂಬಾತನ್ನ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರು ಕೊಡ್ಲಗಿ ತಾಲೂಕಿನ ಕ್ಯಾಸನಕೆರೆ ಗ್ರಾಮದ ರೈತರು ಎಂದು ತಿಳಿದು ಬಂದಿದೆ. ಈ ಬಗ್ಗೆ ಕೊಡ್ಲಗಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!