ಪ್ರಜಾಸ್ತ್ರ ಸುದ್ದಿ
ವಿಜಯಪುರ: ನಾನು ಬಸವಾದಿ ಶರಣರ ಅನುಯಾಯಿ. ಸಿದ್ದೇಶ್ವರ ಶ್ರೀಗಳ ಬದುಕು ನಮಗೆ ಆದರ್ಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸ್ವಾಮೀಜಿಗಳ ಗುರುನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಿದ್ದೇಶ್ವರ ಸ್ವಾಮೀಜಿಗಳು ಜ್ಞಾನ ಸಂಪಾದಿಸಿದರು. ಅದನ್ನು ಸಮಾಜಕ್ಕೆ ಹಂಚಿದರು. ಜಾತಿ, ವರ್ಗ ರಹಿತ ಸಮಾಜಕ್ಕಾಗಿ ಶ್ರಮಿಸಿದರು. ಅವರ ಬದುಕಿನ ಸಂದೇಶ ಹಾಗೂ ಆದಾರ್ಶಗಳನ್ನು ಕಾಪಾಡುವ ಕಾರ್ಯ ಮಾಡಲು ಸರ್ಕಾರ ಸದಾ ಸಿದ್ಧವಿದೆ ಅಂತಾ ಹೇಳಿದರು.