ಪ್ರಜಾಸ್ತ್ರ ಸುದ್ದಿ
ಸಿಂದಗಿ: ನಡೆದಾಡುವ ದೇವರು, ಶತಮಾನದ ಸಂತ ಎಂದೇ ಆರಾಧಿಸುವ ಲಿಂಗೈಕ್ಯ ಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳ ಪ್ರಥಮ ಪುಣ್ಯಸ್ಮರಣೆಯನ್ನು ತಾಲ್ಲೂಕಿನ ಗೋಲಗೇರಿ ಗ್ರಾಮದಲ್ಲಿ ನಡೆಸಲಾಯಿತು.
ಶ್ರೀಗಳ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಬಸವರಾಜ ಕೇಶಟ್ಟಿ, ಶಾಂತಪ್ಪ ಕೇಶಟ್ಟಿ, ಮಲ್ಲಾರಿ ಜೋಶಿ, ಮಡಿವಾಳ ನಾಯ್ಕೋಡಿ, ರಾಜು ಕುಲಕರ್ಣಿ, ಗುರುರಾಜ ಹುರಕಡ್ಲಿ, ವೇಂಕಟೇಶ ಜೋಶಿ, ನಾನಾಗೌಡ ಪಾಟೀಲ, ಗುರುರಾಜ ಕೇಶಟ್ಟಿ, ಮಹಾಂತೇಶ ನಾಯ್ಕೋಡಿ, ಪ್ರಶಾಂತ ಪಟ್ಟಣಶೆಟ್ಟಿ, ಬಸವರಾಜ ನಾವಿ, ಸದಾಶಿವ ಚವ್ಹಾಣ, ಅರುಣ ಏಳಗಿ ಸೇರಿ ಗೋಲಗೇರಿ ಗ್ರಾಮದ ಕಿವುಡ ಮತ್ತು ಮೂಕ ಮಕ್ಕಳ ಶಾಲಾ ವಿದ್ಯಾರ್ಥಿಗಳು, ಸಿದ್ದಸಿರಿ ಬ್ಯಾಂಕಿನ ಸಿಬ್ಬಂದಿ ಉಪಸ್ಥಿತರಿದ್ದರು.