ಪ್ರಜಾಸ್ತ್ರ ಸುದ್ದಿ
ಸಿಂದಗಿ: 75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಎಲ್ಲೆಡೆ ಅಮೃತ ಮಹೋತ್ಸವ ಆಚರಿಸಲಾಗ್ತಿದೆ. ಅದರಂತೆ ಗುರುವಾರ ಸಿಂದಗಿಯಲ್ಲಿ ಯುವ ಮೋರ್ಚಾ ಘಟಕದಿಂದ, ಸ್ವತಂತ್ರ ಹೋರಾಟಗಾರ ವಾಸುದೇವ ಬಲವಂತ ಫಡಕೆ ಗೌರವಾರ್ಥ ಸೈಕಲ್ ಜಾಥಾ ನಡೆಸಲಾಯ್ತು.
ಪಟ್ಟಣದ ಬಸವೇಶ್ವರ ಸರ್ಕಲ್ ನಿಂದ ಫಡಕೆಯವರನ್ನ ಬ್ರಿಟಿಷರು ಸೆರೆ ಹಿಡಿದ ದೇವರನಾವದಗಿ ಗ್ರಾಮದ ತನಕ ಸೈಕಲ್ ಜಾಥಾ ನಡೆಸಲಾಯ್ತು. ಈ ಒಂದು ಕಾರ್ಯಕ್ರಮಕ್ಕೆ ಯುವ ಸಂಕಲ್ಪ ಯಾತ್ರೆ ಎಂದು ಹೆಸರನ್ನ ಇಡಲಾಗಿದೆ. ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ.ಸಂದೀಪ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಪಾಟೀಲ ಕೂಚಬಾಳ, ಮಾಜಿಕ ಶಾಸಕ ರಮೇಶ ಭೂಸನೂರ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ತಾಲೂಕು ಮಂಡಲ ಅಧ್ಯಕ್ಷ ಈರಣ್ಣ ರಾವೂರ, ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಶಂಭು ಕಕ್ಕಳಮೇಲಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಿಲ್ಪಾ ಕುದರಗೊಂಡ, ಶೈಲಜಾ ಸ್ಥಾವರಮಠ, ಸುನಂದಾ ಯಂಪೂರೆ ಸೇರಿದಂತೆ ದೇವರಹಿಪ್ಪರಗಿ, ಬಸವನಬಾಗೇವಾಡಿ, ಇಂಡಿ ಭಾಗದ ವಿವಿಧ ಮೋರ್ಚಾ ಪದಾಧಿಕಾರಿಗಳು ಭಾಗವಹಿಸಿದ್ರು.