ಬ್ರೇಕಿಂಗ್ ನ್ಯೂಸ್: ಸಿಂದಗಿ ಉಪ ಕದನ: ಮೊದಲ ದಿನವೇ ಕೆಆರ್ ಎಸ್ ಅಭ್ಯರ್ಥಿ ಉಮೇದುವಾರಿಕೆ

844

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕಿನ ವಿಧಾನಸಭೆ ಉಪ‌ ಚುನಾವಣೆ ದಿನಾಂಕ ಘೋಷಣೆಯಾಗಿದ್ದು ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಮೊದಲ ದಿನವೇ ಕೆಆರ್ ಎಸ್ ಪಕ್ಷದ ಅಭ್ಯರ್ಥಿಯಾಗಿ ಡಾ.ಸುನೀಲಕುಮಾರ್ ಹಬ್ಬಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಪಕ್ಷದ ಸದಸ್ಯರೊಂದಿಗೆ ತಾಲೂಕು ಆಡಳಿತ ಕಚೇರಿಯಲ್ಲಿ ನಿರ್ಮಿಸಿರುವ ವಿಭಾಗದಲ್ಲಿ ಚುನಾವಣಾಧಿಕಾರಿ ರಾಹುಲ್ ಶಿಂಧೆ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಹಾಯಕ ಚುನಾವಣಾಧಿಕಾರಿ‌ ಸಂಜೀವಕುಮಾರ ದಾಸರ ಹಾಜರಿದ್ದು.
ಇನ್ನು ಕೆಆರ್ ಎಸ್ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ವೇಳೆ ಪಕ್ಷದ ಸದಸ್ಯರಾದ ಅಪ್ಪಣಗೌಡ ಕೆ ಪಾಟೀಲ, ಉಮೇಶ ಮಯೂರಮಠ, ರಘು ಬಾಣಗೇರ ಸಾಥ್ ನೀಡಿದರು.




Leave a Reply

Your email address will not be published. Required fields are marked *

error: Content is protected !!