ವಿಜಯಪುರದಲ್ಲಿ ಇಂದು ನಾಲ್ಕು ನಾಮಪತ್ರ ಸಲ್ಲಿಕೆ

107

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ವಿಜಯಪುರ (ಪ.ಜಾ) ಲೋಕಸಭೆ ಕ್ಷೇತ್ರದಲ್ಲಿ ಬುಧವಾರ ನಾಲ್ಕು ನಾಮಪತ್ರಗಳು ಸಲ್ಲಿಕೆಯಾಗಿವೆ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಬಾಬು ರಾಜೇಂದ್ರ ನಾಯಕ ನಾಮಪತ್ರ ಸಲ್ಲಿಸಿದ್ದು ಕುತೂಹಲ ಮೂಡಿಸಿದೆ. ಯಾಕಂದರೆ ಹಾಲಿ ಸಂಸದ ರಮೇಶ ಜಿಗಜಿಣಗಿಗೆ ಬಿಜೆಪಿ ಟಿಕೆಟ್ ನೀಡಿದೆ. ಅವರು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.

ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್ ಎಸ್) ಪಕ್ಷದಿಂದ ಗಣಪತಿ ಲಾಲಸಿಂಗ್ ರಾಠೋಡ, ಒಂರಾಣಿ ಚೆನ್ನಮ್ಮ ಪಕ್ಷದ ಅಭ್ಯರ್ಥಿಯಾಗಿ ಕವಿತಾ ದೀಪಕ, ಹಾಗೂ ಹಿಂದೂಸ್ತಾನ ಜನತಾ ಪಕ್ಷದಿಂದ ವೆಂಕಟೇಶ್ವರ ಮಹಾಸ್ವಾಮಿಜಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಏಪ್ರಿಲ್ 12 ರಿಂದ  ಇಲ್ಲಿಯವರೆಗೆ  ಒಂಬತ್ತು ಅಭ್ಯರ್ಥಿಗಳಿಂದ ಹದಿನೆಂಟು ನಾಮಪತ್ರಗಳು ಸಲ್ಲಿಕೆಯಾಗಿವೆ.




Leave a Reply

Your email address will not be published. Required fields are marked *

error: Content is protected !!