ಪ್ರಜಾಸ್ತ್ರ ಸುದ್ದಿ
ಸಿಂದಗಿ: ತಾಲೂಕಿನ ಉಪ ಚುನಾವಣೆ ಸಂಬಂಧ ಮಾತ್ನಾಡಿರುವ ತಾಲೂಕು ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ವಿಜಯಕುಮಾರ ಯಾಳವಾರ, ಮಾಜಿ ಶಾಸಕ ಶರಣಪ್ಪ ಸುಣಗಾರ ಅವರಿಗೆ ಟಿಕೆಟ್ ನೀಡಬೇಕು ಎಂದು ಹೇಳಿದ್ದಾರೆ. ಎಂ.ಸಿ ಮನಗೂಳಿ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಈ ವೇಳೆ ಹಿಂದುಳಿದ ನಾಯಕ ಶರಣಪ್ಪ ಸುಣಗಾರ ಅವರು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಎಂದು ಹೈಕಮಾಂಡ್ ಘೋಷಿಸಬೇಕು ಎಂದಿದ್ದಾರೆ.
ಈ ವೇಳೆ ಮಲ್ಲು ಸಾವಳಸಂಗ, ಕುಮಾರ ಗೊಂದುಳಿ, ಪರಶುರಾಮ ಉಪ್ಪಾರ, ಯಮನೂರಿ ಹೂಗಾರ, ಚಿದಾನಂದ ನಾಯ್ಕೋಡಿ, ಸಂತೋಷ ತಳವಾರ, ಬಸವರಾಜ ಕೊಟಾರಗಸ್ತಿ, ನೀಲಕಂಡ ನಾಯ್ಕೋಡಿ ಸೇರಿ ಅನೇಕರು ಉಪಸ್ಥಿತರಿದ್ದರು.