ಇಂದು ಕೊನೆಯ ಹಂತದ ಪಾಲಿ‘ಟ್ರಿಕ್ಸ್’

204

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಹಾನಗಲ್ ಹಾಗೂ ಸಿಂದಗಿ ವಿಧಾನಸಭೆ ಉಪ ಚುನಾವಣೆಯ ಇಂದು ಕೊನೆಯ ದಿನದ ಮತಯಾಚನೆಯಾಗಿದೆ. ನಿನ್ನೆಯಿಂದ ಮನೆ ಮನೆ ಭೇಟಿ ನೀಡಿ ಮತ ಕೇಳುತ್ತಿರುವ ಅಭ್ಯರ್ಥಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಇಂದು ಕೊನೆಯ ದಿನ.

ನಾಳೆ ಮತದಾನ ನಡೆಯಲಿದೆ. ಬೆಳಗ್ಗೆ 7ಗಂಟೆಯಿಂದ ಸಂಜೆ 7ಗಂಟೆಯ ತನಕ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದಕ್ಕಾಗಿ 297 ಮತದಾನ ಕೇಂದ್ರಗಳನ್ನು ತೆರೆಯಲಾಗಿದೆ. ರಾಜಕೀಯ ಪಕ್ಷಗಳಿಗೆ ಇವತ್ತು ಕೊನೆಯ ಹಂತದ ಮತ ಬೇಟೆಯಾಗಿದೆ. ಕ್ಷೇತ್ರದಲ್ಲಿ ಹಣದ ಹೊಳೆ ಹರಿಯುತ್ತಿದೆ ಅನ್ನೋದರ ಕುರಿತು ಹಲವು ಗಂಭೀರ ಆರೋಪಗಳು ಕೇಳಿ ಬಂದಿವೆ. ಕೆಲವು ಕಡೆ ವಿಡಿಯೋಗಳು ಸಹ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ತಮ್ಮ ಪರ ಮತ ಹಾಕಬೇಕು ಎಂದು ಕೇಳಿಕೊಳ್ಳುವ ಅಭ್ಯರ್ಥಿಗಳ ಪಾಲಿಟ್ರಿಕ್ಸ್ ಶುಕ್ರವಾರ ಜೋರಾಗಿರುತ್ತೆ. ನಾಳೆ ಅವರ ಮುಂದಿನ ರಾಜಕೀಯ ಭವಿಷ್ಯ ಭದ್ರವಾಗುತ್ತೆ. ನವೆಂಬರ್ 2ರಂದು ಅದು ತಿಳಿಯುತ್ತೆ. ಹೀಗಾಗಿ ಗೆಲುವಿಗೆ ಯಾವೆಲ್ಲ ರಣತಂತ್ರಗಳನ್ನು ಮಾಡಬೇಕೋ ಅದೆಲ್ಲವೂ ಮಾಡಿಯಾಗಿದ್ದು, ಕೊನೆಯ ಅಸ್ತ್ರ ಏನಾದರೂ ಇದ್ದರೆ ಇಂದು ಸೈಲೆಂಟ್ ಆಗಿ ಪ್ರಯೋಗ ಮಾಡಲಾಗುತ್ತೆ.




Leave a Reply

Your email address will not be published. Required fields are marked *

error: Content is protected !!