ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಇದೀಗ ಎಲ್ಲೆಡೆ ಸೋಮು ಸೌಂಡ್ ಇಂಜಿನಿಯರ್ ಟೀಸರ್ ಸೌಂಡ್ ಜೋರಾಗಿದೆ. ಉತ್ತರ ಕರ್ನಾಟಕ ಮಣ್ಣಿನ ಕಥೆ ಹೊತ್ತಿರುವ ಈ ಚಿತ್ರ ಪಕ್ಕಾ ದೇಸೀ ಸೊಗಡಿನ ಸಂಕಟದ ಕಥೆ ಹೇಳಲು ಸಜ್ಜಾಗಿದ್ದು, ಸಲಗ ಚಿತ್ರದಲ್ಲಿ ಕೆಂಡ ಪಾತ್ರ ಮಾಡಿದ ನಟ ಶ್ರೇಷ್ಠ, ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಕರ್ಮಕ್ಕ ಧರ್ಮಕ್ಕ ಜಗಳ ನಡದೈತಿ ಧರ್ಮದ ಮ್ಯಾಲ ಹೋಗಿ ಕರ್ಮ ಕುಂತೈತಿ ಅನ್ನೋ ಸಾಲುಗಳಿರುವ ಉತ್ತರ ಕರ್ನಾಟಕದ ಭಜನ ಪದದೊಂದಿಗೆ ಟೀಸರ್ ಸಾಗುತ್ತದೆ. ಅಶೋಕ ಮನಗೂಳಿ ಹಾಗೂ ತಂಡ ಹಾಡಿದ ಭಜನ ಪದನ್ನು ಯತಾವತ್ತಾಗಿ ಬಳಸಿಕೊಳ್ಳಲಾಗಿದೆ. ಈ ಮೂಲಕ ನಿರ್ದೇಶಕ ಅಭಿ ಹೊಸ ಕಥೆ ಹೇಳಲು ಸಜ್ಜಾಗಿದ್ದಾರೆ.
ಶ್ರೇಷ್ಠ, ಶ್ರುತಿ ಪಾಟೀಲ, ಜಹಾಂಗಿರ್, ಗಿರಿಶ್ ಜಟ್ಟಿ ಸೇರಿ ಅನೇಕರ ತಾರಾಬಳಗವಿದೆ. ಶರಣ್ ರಾಜ್ ಮ್ಯೂಸಿಕ್, ಮಾಸ್ತಿ ಡೈಲಾಗ್ ಈ ಚಿತ್ರಕ್ಕಿದೆ. ಕ್ರಿಸ್ಟೋಪರ್ ಕಿಣಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಟೀಸರ್ ನೋಡಿದ ಪ್ರತಿಯೊಬ್ಬರು ಕನ್ನಡದಿಂದ ಮತ್ತೊಂದು ಬ್ಲಾಕ್ ಬ್ಲಸ್ಟರ್ ಮೂವಿ ಬರುತ್ತಿದೆ ಎಂದು ಎದುರು ನೋಡುತ್ತಿದ್ದಾರೆ.