ಸಾಗರ: ಪ್ರಧಾನಿ ಮೋದಿ ವಿರುದ್ಧ ಟ್ವೀಟರ್ ನಲ್ಲಿ ಸುಳ್ಳು ಆರೋಪ ಮಾಡಿದ್ದಾರೆಂದು, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಶಿವಮೊಗ್ಗದ ವಕೀಲ ಕೆ.ವಿ ಪ್ರವೀಣ ಎಂಬುವರು, ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪಿಎಂ ಕೇರ್ಸ್ ಫಂಡ್ ನ್ನ ಮೋದಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಅದು ಪಿಎಂ ಕೇರ್ಸ್ ಫಂಡ್ ಅಲ್ಲ, ಪಿಎಂ ಕೇರ್ಸ್ ಫಾರ್ಡ್ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಐದಾರು ಫೋಟೋಗಳನ್ನ ಸಹ ಹಾಕಿದ್ದಾರೆ. ಈ ಮೂಲಕ ಸುಳ್ಳು ಆರೋಪ ಹಾಗೂ ಪ್ರಧಾನಿಯನ್ನ ಅವಹೇಳನ ಮಾಡುವುದಾಗಿದೆ ಎಂದು ಕೇಸ್ ದಾಖಲಿಸಲಾಗಿದೆ.
ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ವಿರುದ್ಧ ಆದಷ್ಟು ಬೇಗೆ ತನಿಖೆ ಮಾಡುವಂತೆ ದೂರುದಾರ ವಕೀಲ ಕೆ.ವಿ ಪ್ರವೀಣ ಒತ್ತಾಯಿಸಿದ್ದಾರೆ.